ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಮ್’ಸಿ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣದ ಮೂಲಕ 77ನೇ ಸ್ವಾತಂತ್ರ್ಯೋತ್ಸವ ವಿಜೃಂಭಣೆಯಿoದ ಆಚರಿಸಲಾಯಿತು. ಸ್ವಾತಂತ್ರಕ್ಕಾಗಿ ಹೋರಾಡಿದ ಮಹನೀಯರ ನೆನೆದು ಮಾತನಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರಮೋದ ಸೋಳಂಕಿ, ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ, ಸಹಗೌರವ ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಮಾಜಿ ಅಧ್ಯಕ್ಷ ರಾಜಶೇಖರ ವಾಲಿ, ಸಂಜಯ ಭಂಡಾರಕರ, ಶಿವನಗೌಡ ಪಾಟೀಲ, ವೀರಣ್ಣ ವಾಲಿ, ನಾಗರಾಜ ಮರದ, ಶಿವಯೋಗಿ ಹೊಸಕಟ್ಟಿ, ಅಶೋಕ ಬಾಳಿಕಾಯಿ, ನಾರಾಯಣ ಭಂಡಾರಕರ, ವಿನೋದ ತಲ್ಲೂರ, ಸುರೇಶ ಜೈನ್, ಶಿವಲಿಂಗಪ್ಪ ಜಿಗಜಿನ್ನಿ, ಈಶ್ವರಪ್ಪ ಹೆಬಸೂರ, ಸುರೇಶ ಹುಣಸಿಕಟ್ಟಿ, ಬಿ.ಜಿ. ಮೇಟಿ, ಕಿರಣ, ವೀರೇಶ, ಪ್ರಶಾಂತ, ಸರ್ವಸದಸ್ಯರು, ಕಾರ್ಮಿಕ ಮುಖಂಡರು ಇದ್ದರು.