36.8 C
Hubli
ಮಾರ್ಚ್ 29, 2024
eNews Land
ಸುದ್ದಿ

ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಯುವಕರ ಆದ್ಯ ಕರ್ತವ್ಯವಾಗಿದೆ: ಬಿ.ಎನ್.ಹೊಸಮನಿ

ಇಎನ್ಎಲ್ ಅಣ್ಣಿಗೇರಿ:  ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಯವಕರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಾಚಾರ್ಯ ಡಾ. ಬಿ.ಎನ್.ಹೊಸಮನಿ ಹೇಳಿದರು.
ಪಟ್ಟಣದ ಎಂ.ಬಿ.ಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಘಟಕ ಸಂಯೋಗದಲ್ಲಿ ವಿದ್ಯಾರ್ಥಿಗಳಿಗೆ ದೇಶ ಭಕ್ತಿ, ರಾಷ್ಟçನಿರ್ಮಾಣ, ವಿಷಯದ ಕುರಿತು ಆಯೋಜಿಸಿದ ಭಾಷಣ ಸ್ಪರ್ಧೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಹುಸೇನಸಾಬ ಬೆಟಗೇರಿ, ಈರಣ್ಣ ಗುರಿಕಾರ, ಗೌತಮರಡ್ಡಿ, ಗೀತಾ ಹಿರೇಮಠ, ಸಲೇಶಾ ಬೆಳಗಾಂ, ಡಾ. ಎ.ಸಿ.ವಾಲಿ, ಎಸ್.ಎಸ್.ಸೂಡಿ, ವಿಜಯಲಕ್ಷ್ಮಿಪಾಟೀಲ, ಶ್ರೀಧರ ಲೋಣಕರ, ಡಾ.ಸುನಂದಾ ಹಾಡಕಾರ,ಈರವ್ವ ಅಂಗಡಿ, ಪ್ರೇಮಾ ಪೂಜಾರ, ಅಧ್ಯಾಪಕರ ವೃಂದ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ ವಿತರಿಸಲಾಯಿತು. ಡಾ.ಸುಧಾ ಎಸ್.ಕೌಜಗೇರಿ ಸ್ವಾಗತಿಸಿದರು. ವಾಯ್ ಆಯ್.ಚವ್ಹಾಣ ನಿರೂಪಿಸಿದರು.

Related posts

ಅಣ್ಣಿಗೇರಿ ಪುರಸಭೆ ಮತದಾನ : ಜಾತ್ರೆ, ಸಂತೆ ನಿಷೇಧ

eNewsLand Team

ಪಕ್ಷಾತೀತ, ಧರ್ಮಾತೀತ, ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಿ: ಡಿಸಿ ಗುರುದತ್ತ ಹೆಗಡೆ

eNEWS LAND Team

ನೈಋತ್ಯ ರೈಲ್ವೆ: ಯಾವ ರೈಲು ರದ್ದು? ಮಾರ್ಗ ಬದಲಾವಣೆ, ಇಲ್ಲಿದೆ ಮಾಹಿತಿ

eNEWS LAND Team