22 C
Hubli
ಏಪ್ರಿಲ್ 20, 2024
eNews Land
ರಾಜಕೀಯ

ಧಾರವಾಡ ಎಂಎಲ್ಸಿ ಚುನಾವಣೆ: ಪ್ರದೀಪ್ ಶೆಟ್ಟರ್ ನಾಮಪತ್ರ ಸಲ್ಲಿಕೆ

ಇಎನ್ಎಲ್ ಧಾರವಾಡ

ವಿಧಾನ ಪರಿಷತ್ ಚುನಾವಣೆ ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಲ್ಕು ಸೆಟ್ ಗಳಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ನಗರದ ನೌಕರರ ಭವನದ ಎದುರಿಂದ ಭರ್ಜರಿ ಮೆರವಣಿಗೆಯಲ್ಲಿ ಆಗಮಿಸಿದ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಅವರು, ಧಾರವಾಡ ಕ್ಷೇತ್ರಕ್ಕೆ ಮೂರನೇ ಬಾರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಆರು ವರ್ಷದಿಂದ ಬಿಜೆಪಿ ಎಂಎಲ್‌ಸಿ ಆಗಿದ್ದೆ. ಪರಿಷತ್ ಒಳಗೆ, ಹೊರಗೆ ಹೋರಾಟಗಳನ್ನು ಮಾಡಿದ್ದೇವೆ ಎಂದರು.

ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅನುದಾನ ತಂದು ಗ್ರಾಪಂಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಮೂರನೇ ಸಲ ಇವತ್ತು ಬಿಜೆಪಿ ಟಿಕೆಟ್ ಕೊಟ್ಟಿದೆ. ಈ ಸಲವೂ ಗೆದ್ದು ಜಯಶಾಲಿಯಾಗಿ ಬರುವೆ. ಮುಂದಿನ ಆರು ತಿಂಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವೆ ಎಂದರು.

Related posts

ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

eNEWS LAND Team

ಪಕ್ಷೇತರವಾಗಿ ನಿಂತ್ರು ನವಲಗುಂದದಲ್ಲಿ ಗೆಲ್ಲುತ್ತೇನೆ; ಇನ್ ಡೈರೆಕ್ಟ್ ಆಗಿ ತೆನೆ ಹೊರುವ ಅಗತ್ಯ ನನಗಿಲ್ಲ ಎಂದರಾ ಕೋನರಡ್ಡಿ?!!

eNewsLand Team

2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

eNEWS LAND Team