ಇಎನ್ಎಲ್ ಧಾರವಾಡ: ಹಿಜಾಬ್ ವಿಚಾರವಾಗಿ ಅದೊಂದು ಗಲಾಟೆಯೇ ಆಗಬಾರದಿತ್ತು. ಕಾನೂನಿನ ಪ್ರಕಾರ ವಸ್ತ್ರ ಸಂಹಿತೆಯಿದೆ ಅದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದು ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪಟ್ಟಬದ್ಧ ಶಕ್ತಿಗಳು ಮಕ್ಕಳಿಗೆ ಕುಮ್ಮಕ್ಕು ನೀಡುತ್ತಿವೆ. ಭಾರತದಲ್ಲಿ ಒಂದು ಸಂಸ್ಕ್ರತಿ ಇದೆ.
ಕಾಂಗ್ರೆಸ್ ಈ ವಿಚಾರದಲ್ಲಿ ಅದರ ನಿಲುವು ಸ್ಪಷ್ಟ ಪಡಿಸಲಿ. ನಾವು ಬೇಕಾದರೆ ಕೇಸರಿ ಶಾಲು ಹಾಕಿ ಬರದಂತೆ ಹೇಳತ್ತೇವೆ. ಎಲ್ಲ ಪಾರ್ಟಿಗಳು ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಜೋಶಿ ಹೇಳಿದರು.