ಇಎನ್ಎಲ್ ಬೆಂಗಳೂರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿಗೆ ತೆರಳಿದ್ದು ಸಂಪುಟ ವಿಸ್ತರಣೆ, ವಿಧಾನ ಪರಿಷತ್ ಚುನಾವಣೆ ತಯಾರಿ ಹಾಗೂ ಉಪಚುನಾವಣೆಯ ಸೋಲು ಗೆಲುವಿನ ಕುರಿತು ಪಕ್ಷದ ವರಿಷ್ಠರ ಜತೆಗೆ ಚರ್ಚೆ ನಡೆಸಲಿದ್ದಾರೆ.
ಮಾಧ್ಯಮದ ಜತೆ ಮಾತನಾಡಿದ ಅವರು, ಗುರುವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಕೇಳಿದ್ದು ನಾಳೆ ( ಗುರುವಾರ) ಸಿಗುವ ನಿರೀಕ್ಷೆ ಇದೆ. ಜತೆಗೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮಯ ಕೇಳಿದ್ದೇವೆ ಎಂದರು.
ರಾಜ್ಯದ ಜಲವಿವಾದ ಕೃಷ್ಣಾ, ಕಾವೇರಿ ಕುರಿತು ನಮ್ಮ ವಕೀಲರ ಜತೆಗೆ ಚರ್ಚೆ ನಡೆಸಲಿದ್ದೇವೆ. ಅಲ್ಲದೆ ಇನ್ನೊಂದು ರಾಷ್ಟ್ರೀಯ ಚಾನಲ್ ಒಂದರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.