ಯುವಕರು ಹೆಚ್ಚಾಗಿ ಪಾಲ್ಗೊಳ್ಳಿ: ಸಿ.ಬಿ.ಹೊನ್ನಿಹಳ್ಳಿ
ಇಎನ್ಎಲ್ ಕಲಘಟಗಿ: ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ನಿಮಿತ್ತ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ.ಇದೇ ಗ್ರಾಮದ ಉಮಾ ಮತ್ತು ಶಿವಪುತ್ರಪ್ಪ ಆಲದಕಟ್ಟಿ ಇವರ ಮಗನಾದ 21 ವಯಸ್ಸಿನ ಕುಮಾರ ಸಂತೋಷ ಇವರಿಂದ ಕಲ್ಲು ಸಿಡಿ ಹೊಡೆಯುವುದು ಸೇರಿದಂತೆ ವಿವಿಧ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ. ಯುವ ಸಮುದಾಯವು ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ಕ್ರಿಯಾ ಶೀಲರಾಗುವುದು ತುಂಬಾ ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಜನಾಂಗವು ಹೆಚ್ಚಾಗಿ ಪಾಲ್ಗೊಂಡು ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಿ.ಬಿ.ಹೊನ್ನಿಹಳ್ಳಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..
ಜಿ.ಎನ್.ಘಾಳಿ, ಆರ್.ಬಿ.ಜಮಖಂಡಿ, ತರಬೇತಿಗಾರ ಶಾಂತಯ್ಯ ಹಿರೇಮಠ ಹಾಗೂ ಇನ್ನಿತರೇ ಹಿರಿಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಾನಿಧ್ಯವನ್ನು ರೇವಣಸಿದ್ದಶಿವಚಾರ್ಯ ಸ್ವಾಮಿಗಳು ಹಾಗೂ ಚನ್ನವೀರಶಿವಯೋಗಿಗಳು ವಹಿಸಲಿದ್ದು ಶಾಸಕ ಸಿ.ಎಮ್.ನಿಂಬಣ್ಣವರ ಹಾಗೂ ತಾಲೂಕಿನ ಗಣ್ಯರು ಭಾಗವಿಸುವರು ಎಂದು ಪ್ರಕಟಣೆಗೆ ತಿಳಿಸಿದ್ದಾರೆ.