22 C
Hubli
ಏಪ್ರಿಲ್ 20, 2024
eNews Land
ಸುದ್ದಿ

ತಲೆ ತಗ್ಗಿಸಿ ನಿನ್ನ ಕೆಲಸ ಮಾಡಿದರೆ ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ: ಪ್ರಾಚಾರ್ಯ ಬಿರಾದಾರ

ಇಎನ್ಎಲ್ ಕಲಘಟಗಿ: ಪಟ್ಟಣದ  ವೆಲ್ಪರ್ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ  ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಿದರು.

 

ತಲೆ ತಗ್ಗಿಸಿ ನಿನ್ನ ಕೆಲಸ ಮಾಡಿದರೆ ಅದರ ಫಲ ನಿನ್ನನ್ನು ತಲೆ ಎತ್ತುವಂತೆ ಮಾಡುತ್ತದೆ ಎಂಬ ಸ್ವಾಮಿ ವಿವೇಕಾನಂದರ ಮಾತುಗಳಿಗೆ ಅನುಗುಣವಾಗಿ ಯುವಕರು ಮುಂದಿನ ಭವಿಷ್ಯ ರೂಪಿಸಲು ಪ್ರೇರೇಪಣೆಯ ಮಾತುಗಳನ್ನು ಪ್ರಾಚಾರ್ಯ ಬಿ.ಜಿ.ಬಿರಾದಾರ ಅಧ್ಯಕ್ಷತೆ ನುಡಿಗಳನ್ನು ಮಾತನಾಡಿದರು. ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿವೇಕಾನಂದರನ್ನು ಸ್ಮರಿಸುತ್ತಾ ಕಾರ್ಯಕ್ರಮವನ್ನು ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಕಲಘಟಗಿಯ ಕೃಷಿ ನಿರ್ದೇಶಕ ಎನ್.ಎಸ್.ಕಟ್ಟೆಗೌಡರ ಮುಖ್ಯ ಅತಿಥಿ ಹಾಗೂ ಕಾಲೇಜ್ ಸಿಬ್ಬಂದಿ ವರ್ಗದವರಾದ ಪ್ರೋ.ಹೊರಕೆರಿ, ಪ್ರೋ,ಎನ್.ಎಸ್.ಎಮ್ಮಿ, ಪ್ರೋ.ಅನಿತಾ ಭಟ್, ಪ್ರೋ.ಮುರಗೋಡಮಠ, ರೆ.ಬ್ರದರ್ ನಿಜು ಥಾಮಸ್ ಹಾಗೂ ಕಾಲೇಜ್ ಪ್ರಾಚಾರ್ಯ ಬಿ.ಜಿ.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

Related posts

2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

eNEWS LAND Team

ಅಣ್ಣಿಗೇರಿ: ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

eNEWS LAND Team

ವಿವಿಧ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

eNEWS LAND Team