ಇಎನ್ಎಲ್ ಹುಬ್ಬಳ್ಳಿ: ಸದ್ಗುರು ಸಿದ್ಧಾರೂಢರ ಮಠದಲ್ಲಿ ಬರುವ ಶಿವರಾತ್ರಿ ಮಹೋತ್ಸವದ ನಿಮಿತ್ತವಾಗಿ ಶ್ರೀ ಮಠದ ಪಾಠಶಾಲೆ ವಿದ್ಯಾರ್ಥಿಗಳು, ಸೇವಕರು, ಸಿಬ್ಬಂದಿ ಮತ್ತು ಧರ್ಮ ದರ್ಶಿಗಳಿಂದ ಸದ್ಗುರು ಸಿದ್ಧಾರೂಢ ಮಠದಲ್ಲಿ ಬೆಳಗ್ಗೆಯಿಂದ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಮಕ್ಕಳು ಮಹಿಳೆಯರು ಮತ್ತು ಹಿರಿಯರು ಸೇರಿದಂತೆ ಹಲವಾರು ಭಕ್ತರು ಶುಚಿ ಕಾರ್ಯದಲ್ಲಿ ತೊಡಗಿದರು. ಕೈಲಾಸ ಮಂಟಪ, ಗುರುನಾಥಾರೂಢ ಸ್ವಾಮೀಜಿ ಮಂದಿರ, ಶ್ರೀ ಸಿದ್ಧಾರೂಢರ ಸನ್ನಿಧಿ ಸೇರಿದಂತೆ ಎಲ್ಲೆಡೆ ಸ್ವಚ್ಛಗೊಳಿಸುವ ಕ್ರಿಯೆ ನಡೆಯಿತು.
ಸ್ವಯಂ ಸೇವಾರ್ತಿಗಳಿಗೆ ಕೆಲವು ಭಕ್ತಾದಿಗಳು ಉಪಾಹಾರ ಮತ್ತು ಪಾನೀಯ ಗಳ ವ್ಯವಸ್ಥೆ ಮಾಡಿದ್ದರು.