28.5 C
Hubli
ಏಪ್ರಿಲ್ 30, 2024
eNews Land
ಸುದ್ದಿ

ಸಾಸ್ವಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಪೀಲ್ಟರ್ ವಿತರಣೆ ಹಾಗೂ ದಾನಿಗಳಿಗೆ ಸನ್ಮಾನ 

ಇಎನ್‌ಎಲ್‌ ಅಣ್ಣಿಗೇರಿ: ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರ ದಿ.ಹಿಮಾಲಯ ವೆಲ್ನೆಸ್ ಕಂಪನಿ ಮಾಕಳಿ ವತಿಯಿಂದ ಶಾಲಾ ಮಕ್ಕಳಿಗಾಗಿ 75 ಸಾವಿರ ರೂಗಳ ವೆಚ್ಚದಲ್ಲಿ ನೀರಿನ ಪಿಲ್ಟರ್ 77ನೇ ಸ್ವಾತಂತ್ರೋತ್ಸವ ದಿನಾಚರಣೆ ಸವಿನೆನಪಿಗೆ ಕುದುರೆ ಮೆಂತೆ ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಬೆನಕನಳ್ಳಿ ನೀಡಿದರು.

ಅಣ್ಣಿಗೇರಿ ಕೆನರಾ ಬ್ಯಾಂಕ ಮ್ಯಾನೇಜರ್ ಗಿರೀಶ ಬಾಳಗಿ ಕೆನರಾ ಬ್ಯಾಂಕ ವತಿಯಿಂದ ವಿದ್ಯಾಜ್ಯೋತಿ ಯೋಜನೆಯಲ್ಲಿ ಕೊಂಡಿಕೊಪ್ಪ ಗ್ರಾಮದ ಸರಕಾರಿ ಪೌಢಶಾಲೆಯ 8,9,10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ 5 ಸಾವಿರ ರೂಗಳು ಡಿ.ಡಿ.ನೀಡಿದರು.
ಸಾಸ್ವಿಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5,6,7ನೇ ತರಗತಿಯ ಅತಿ ಹೆಚ್ಚು ಅಂಕ ಪಡೆದ ಎಸ್.ಸಿ.ಮತ್ತು ಎಸ್.ಟಿ. 3 ವಿದ್ಯಾರ್ಥಿಗಳಿಗೆ 2500 ರೂಗಳ ಡಿ.ಡಿ. ನೀಡಿದರು.
ಬೆಂಗಳೂರಿನ ದಿ.ಹಿಮಾಲಯ ವೆಲ್ನೆಸ್ ಕಂಪನಿ ಮಾಕಳಿ ಗ್ರಾಮೀಣ ಪ್ರದೇಶದ ಮಕ್ಕಳು ಶಾಲೆಯಲ್ಲಿ ಶುದ್ಧನೀರು ಕುಡಿದು ಆರೋಗ್ಯದಿಂದ ಸದೃಢವಾಗಿರಲು ನೀರಿನ ಪಿಲ್ಟರ್ ನೀಡಿದ್ದು ಶ್ಲಾಘನೀಯವೆಂದು ಶಾಲೆಯ ಪ್ರಧಾನ ಗುರುಗಳು ಹೇಳಿದರು.
ಸಾಸ್ವಿಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳು ಅಧ್ಯಾಯನ ಮಾಡಿ ಹೆಚ್ಚು ಅಂಕ ಗಳಿಸಿ ವಿದ್ಯಾಜ್ಯೋತಿ ಯೋಜನೆಯ ಸದ್ಭಳಿಕೆ ಪಡೆದುಕೊಳ್ಳಬೇಕೆಂದು ಸನ್ಮಾನಿತರಾದ ಕೆನರಾ ಬ್ಯಾಂಕ ಮ್ಯಾನೇಜರ್ ಗಿರೀಶ ಬಾಳಗಿ ಹೇಳಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಮ್.ಸಿ. ಆಡಳಿತ ಮಂಡಳಿ ಹಾಗೂ ಶಿಕ್ಷಕರ ವೃಂದ ಕುದುರೆ ಮೆಂತೆ ಬೆಳಗಾರರ ಸಂಘದ ಅಧ್ಯಕ್ಷ ಶಿವಾನಂದ ಬೆನಕನಳ್ಳಿ ಹಾಗೂ ಕೆನರಾ ಬ್ಯಾಂಕ ಮ್ಯಾನೇಜರ್ ಗಿರೀಶ ಬಾಳಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗ, ಗ್ರಾಮಸ್ಥರು, ಗ್ರಾಪಂ ಸದಸ್ಯರು, ಪಾಲಕರು, ವಿದ್ಯಾರ್ಥಿಗಳು, ಮುತ್ತು ಗಾಣಗೇರ, ರಾಘವೇಂದ್ರಗೌಡ ಪರ್ವತಗೌಡ್ರ, ವಿಜಯ ಕಾಳಗಿ, ಶಕೀಲ ಪಾಟೀಲ, ಉಪಸ್ಥಿತರಿದ್ದರು. ವಿನಾಯಕ ಬೋಸ್ಲೆ ನಿರೂಪಿಸಿ ವಂದಿಸಿದರು.

Related posts

 ದ.ಆಫ್ರಿಕಾದ ಹೋರಾಟಗಾರ ಡೆಸ್ಮಂಡ್‌ ಟುಟು ನಿಧನ

eNewsLand Team

ಅಣ್ಣಿಗೇರಿ ರುದ್ರಮುನಿ ಶ್ರೀಗಳ ಪುಣ್ಯಾರಾಧನೆ

eNEWS LAND Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team