ಇಎನ್ಎಲ್ ಬ್ಯೂರೋ
ದೆಹಲಿ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಗೊಂಡಿದ್ದ ಕೇಂದ್ರ ಸರ್ಕಾರದ ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ (PM-GKY) ಯನ್ನು ಉಚಿತ ಪಡಿತರ ನೀಡಲು 2022ರ ಮಾರ್ಚ್ವರೆಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ.
ಈ ಯೋಜನೆಯ ಹಂತ-I ಮತ್ತು ಹಂತ-II ಕ್ರಮವಾಗಿ ಏಪ್ರಿಲ್ನಿಂದ ಜೂನ್, 2020 ಮತ್ತು ಜುಲೈನಿಂದ ನವೆಂಬರ್, 2020 ರವರೆಗೆ ಇತ್ತು.
ಯೋಜನೆಯ ಹಂತ-III ಮೇನಿಂದ ಜೂನ್, 2021ರವರೆಗೆ ಇತ್ತು. ಯೋಜನೆಯ ಹಂತ-IV ಪ್ರಸ್ತುತ ಜುಲೈ-ನವೆಂಬರ್, 2021ರ ವರೆಗೆ ಇದೆ. ಪ್ರಸ್ತುತ PMGKAY-IV ಅಡಿಯಲ್ಲಿ ವಿತರಣೆ ನಡೆಯುತ್ತಿದೆ.
ಇದುವರೆಗೆ ಸುಮಾರು 74.64 ಕೋಟಿ, 74.4 ಕೋಟಿ, 73.75 ಕೋಟಿ, 70.8 ಕೋಟಿ ಮತ್ತು 35.8 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ.