ಇಎನ್ಎಲ್ ಧಾರವಾಡ: ಹಳೇ ಹುಬ್ಬಳ್ಳಿ ನೇಕಾರನಗರ ಮಾವನೂರ-ಕಟ್ಟೂರ ರಸ್ತೆಯಲ್ಲಿನ ಶಾದಿ ಮಹಲ್ ಕಟ್ಟಡದ ಗೋಡೆಗೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ತಂತಿ ತಗುಲಿ ಮೇಲಿಂದ ಕೆಳಗೆ ಬಿದ್ದು ಭಯಾನಕವಾಗಿ ಮೃತಪಟ್ಟಿದ್ದಾನೆ.
ಅಬ್ಬಾಸ್’ಅಲಿ ಕುರಬಗೊಂಡ (32) ದಾರುಣವಾಗಿ ಮೃತಪಟ್ಟಿದ್ದಾನೆ.
ನಿರ್ಮಾಣ ಹಂತದ ಕಟ್ಟಡಕ್ಕೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ತಂತಿಗೆ ಪೇಂಟಿಂಗ್ ರೂಲರ್ ತಗುಲಿದ್ದರಿಂದ, ವಿದ್ಯುತ್ ಪ್ರವಹಿಸಿ ತೀವ್ರ ಸುಟ್ಟು ಗಾಯಗೊಂಡು ಮೇಲಿಂದ ಕೆಳಗೆ ಬಿದ್ದಿದ್ದಾನೆ.
ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃಪಟ್ಟಿದ್ದಾರೆ. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಮೆಹಬೂಬ್’ಸಾಬ್ ಪಠಾಣ್ ವಿರುದ್ಧ ನಿರ್ಲಕ್ಷ್ಯ ತೋರಿದ್ದಾರೆ ಎಂದು ದೂರು ದಾಖಲಾಗಿದೆ.