ಇಎನ್ಎಲ್ ಧಾರವಾಡ: ಮೊಬೈಲ್ ಬ್ಯಾಂಕ್ ಆ್ಯಪ್ ಬ್ಲಾಕ್ ಆಗಿದೆ ಎಂದು ಧಾರವಾಡದ ವೈದ್ಯೆ ಅನುಶ್ರೀ ಎ. ಅವರ ಮೊಬೈಲ್ಗೆ ಸಂದೇಶದ ಜೊತೆ ಲಿಂಕ್ ಕಳುಹಿಸಿದ ವಂಚಕ, ಅವರ ಖಾತೆಯಿಂದ ₹3.94 ಲಕ್ಷ ಆನ್ಲೈನ್ನಲ್ಲಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದು, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕ ಕಳುಹಿಸಿ ಲಿಂಕ್ ತೆರೆದ ವೈದ್ಯೆ ಅನುಶ್ರೀ, ಅಲ್ಲಿ ಕೇಳಲಾದ ಪಾನ್ ಕಾರ್ಡ್ ನಂಬರ್, ಜನ್ಮ ದಿನಾಂಕ ಹಾಗೂ ಮೊಬೈಲ್ಗೆ ಬಂದ ಒಟಿಪಿ ನಮೂದಿಸಿ ಸಬ್ಮೀಟ್ ಮಾಡಿದ್ದಾರೆ. ತಕ್ಷಣ ಅವರ ಖಾತೆಯಿಂದ ಹಣ ಕಡಿತವಾಗಿದೆ.