eNews Land
ಸುದ್ದಿ

ನೇತಾಜಿ ಬೋಸ್ ಹಾಗೂ ಪ್ರಮೋದ ಮುತಾಲಿಕ: ಜನುಮ ದಿನ

Listen to this article

ಇಎನ್ಎಲ್ ನವಲಗುಂದ: ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಜನ್ಮದಿನ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣ ಹಂಪಲ ವಿತರಿಸಲಾಯಿತು.
ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದಜಿ ಹಾಗೂ ನೇತಾಜಿ ಅವರ ಜನ್ಮದಿನ ರೋಗಿಗಳಿಗೆ ಹಣ್ಣು ವಿತರಣೆ.

    ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ ಮುತಾಲಿಕ ಅವರ 67 ನೇ ವರ್ಷದ ಹುಟ್ಟಿದ ಹಬ್ಬದ ದಿನಾಚರಣೆ ಹಾಗೂ ನೇತಾಜಿ ಸುಭಾಷ ಚಂದ್ರ ಬೋಸ್ ಅವರ 125 ನೇ ದಿನಾಚರಣೆ ಅಂಗವಾಗಿ ತಾಲೂಕಾ ಶ್ರೀರಾಮ ಸೇನೆಯಿಂದ ರವಿವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲಗಳ ವಿತರಣೆ ಮಾಡಿದರು.
ತಾಲೂಕಾ ಅಧ್ಯಕ್ಷ ವೀರಣ್ಣ ಪೂಜಾರ ಅವರು ಮಾತನಾಡಿ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದಜಿ ಅವರು 100 ವರ್ಷ ಬಾಳಲಿ ಆರೋಗ್ಯವಂತರಾಗಿ ಸದಾ ಹಿಂದುತ್ವದ ಮಾರ್ಗದರ್ಶನ ಯುವಕರಿಗೆ ಸಿಗುವಂತಾಗಲಿ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಹಿಂದೂ ರಾಷ್ಟ್ರವನ್ನು ಒಗ್ಗೂಡಿಸಲು ಬ್ರೀಟಿಷರ ವಿರುದ್ದ ಯುವ ಸೇನೆಯನ್ನು ಕಟ್ಟುವುದರ ಮೂಲಕ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಅವರ ದಿನಾಚರಣೆ ಇಂದೇ ಇರುವುದರಿಂದ ಶ್ರೀರಾಮ ಸೇನೆ ಕಾರ್ಯಕರ್ತರು ಸರಕಾರಿ ಆಸ್ಪತ್ರೆಯಲ್ಲಿರುವಂತಹ ಬಡ ರೋಗಿಗಳಿಗೆ ಹಣ್ಣು ಹಂಬಲವನ್ನು ಹಂಚುವುದರ ಮೂಲಕ ಜನ್ಮ ದಿನೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಕುಂಬಾರ, ಜಗದೀಶ ವಡ್ಡರ, ಭೀಮಶಿ ನಿಂಬಣ್ಣವರ, ಶಿವು ಹೆಬ್ಬಾಳ, ದೇವರಾಜ ಪೂಜಾರ, ಸುನೀಲ ನರಸಪ್ಪನವರ, ಹುಚ್ಚಪ್ಪ ದೊಡಮನಿ, ಸರಕಾರಿ ಆಸ್ಪತ್ರೆ ವೈದರು ಹಾಗೂ ಶೂರ್ಷಕಿಯರು ಇದ್ದರು.

Related posts

ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

eNEWS LAND Team

ಹುಧಾ ಪಾಲಿಕೆ ವಿರುದ್ಧ ದೂರು ಕೊಟ್ಟವಗೆ ₹ 20 ಸಾವಿರ ದಂಡ!!

eNewsLand Team

ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

eNEWS LAND Team