ಇಎನ್ಎಲ್ ಧಾರವಾಡ: ಪಂಜಾಬ್’ನಲ್ಲಿ ಪ್ರಧಾನಿ ಮೋದಿ ಅವರ ಭದ್ರತಾ ಲೋಪ ಹಿನ್ನೆಲೆಯಲ್ಲಿ ಮೋದಿ ಅವರ ಆಯುರಾರೋಗ್ಯ ಹೆಚ್ಚಾಗಲೆಂದು ವಿಶೇಷ ಪೂಜೆ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಜಪ ನಡೆಯಿತು.
ಬಿಜೆಪಿ ಮಹಿಳಾ ಮೊರ್ಚಾದ ವತಿಯಿಂದ ಪ್ರಾರ್ಥನೆ ಮಾಡಲಾಯಿತು. ಮೋದಿ ಭಾವಚಿತ್ರ ಹಿಡಿದು ಪೂಜೆ ಸಲ್ಲಿಸಲಾಯಿತು.
ಇನ್ನೊಂದೆಡೆ ಧಾರವಾಡದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪಂಜಾಬ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.