ಇಎನ್ಎಲ್ ಧಾರವಾಡ: ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ದುರ್ಗದಬೈಲ್ ಹತ್ತಿರದ ಎಂ. ಜಿ. ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿ ಪರಿಶೀಲನೆ ಮಾಡಿದರು.
ಎಂ. ಜಿ. ಮಾರುಕಟ್ಟೆಯಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ, ಹಾಗೂ ಶೌಚಾಲಯ, ರಸ್ತೆಕಾಮಗರಿ , ಮಳೆನೀರಿನ ಸಮಸ್ಯೆ ಬಗ್ಗೆ ಸ್ಮಾರ್ಟ್ ಸಿಟಿ ಮತ್ತು ಮಹಾನಗರಪಾಲಿಕೆ ಅಧಿಕಾರಿಗಳು ಸಮಸ್ಯೆ ಅಲಿಸಿದರು.
ಶಾಸಕರು ಕೂಡಲೇ ಎಂ ಜಿ ಮಾರುಕಟ್ಟೆ ಯಲ್ಲಿನ ಅವ್ಯವಸ್ಥೆ ಸಮಸ್ಯೆ ಬಗೆಹರಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಆದೇಶಿಸಿದರು , ಸ್ವಚ್ಛ ಹಾಗೂ ಪಾರದರ್ಶಕ ಕೆಲಸ ಮಾಡಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು ಎಂದರು.
ಈ ವೇಳೆ ಪಟ್ಟಣ ಮಾರಾಟ ಸಮಿತಿ ಚುನಾಯಿತ ಪ್ರತಿನಿಧಿ ಜಾಫರ್ ಮುಲ್ಲಾನವರ್, ಬಿಲೇಪಸಾರ್, ಮೊಹಮ್ಮದ್ ಲೋದಿ, ರಫಿಕ ದಂಡೋತಿ, ಪರ್ಮಾ ಶೇಟ್,ನೂರಹ್ಮದ್, ಬಾಶಿರಹ್ಮದ್,ಇಕ್ಬಾಲ್, ಅಬ್ದುಲ್ ಘನಿ ಅದೋಣಿ,ಮನಿಯರ್, ಹಾಕಿಮಸಾಬ್, ಖಾದರ್ ಪಾಠವೇಗರ್ ಎಂ. ಜಿ. ಮಾರುಕಟ್ಟೆಯ ನೂರಾರು ವ್ಯಾಪಾರಸ್ಥರು ಹಾಜರಿದ್ದರು.