ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ಮೂರು ಸಾವಿರಮಠದಲ್ಲಿ ಕಾಶಿಯ ವಿಶ್ವನಾಥ ಮಂದಿರ ಲೋಕಾರ್ಪಣೆಯ ‘ದಿವ್ಯ ಕಾಶಿ, ಭವ್ಯ ಕಾಶಿ’ ಉದ್ಘಾಟನಾ ಸಮಾರಂಭದ ನೇರಪ್ರಸಾರ ಕಾರ್ಯಕ್ರಮ ನಡೆಯಿತು.
ಶ್ರೀಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರಧಾನಿ ಮೋದಿ ದೇಶದ ಶ್ರೇಷ್ಠ ಸಂತರು. 350 ವರ್ಷಗಳ ಬಳಿಕ ಅವರಿಂದ ಕಾಶಿ ಪುನರುತ್ಥಾನ ಆಗಿದೆ. ಅವರಿಂದಾಗಿ ಕಾಶಿ ವಿಶ್ವನಾಥ ದರ್ಶನ ಸರಳ, ಸುಲಭವಾಗಿದೆ ಎಂದರು.