ಇಎನ್ಎಲ್ ಬೆಳಗಾವಿ:
ನಗರದ ಖ್ಯಾತ ಖಡೇ ಬಜಾರದಲ್ಲಿರುವ ಚಿನ್ನಾಭರಣ ಅಂಗಡಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮುಂದುವರೆಸಿದ್ದಾರೆ.
ಸೋಮವಾರ ಬೆಳಗ್ಗೆ ಇಲ್ಲಿನ ಪೋತದಾರ ಜುವೆಲ್ಲರ್ಸ್ ಅಂಗಡಿ ಮತ್ತು ಹನುಮಾನ ನಗರದಲ್ಲಿರುವ ಅಂಗಡಿ ಮಾಲೀಕರ ಮನೆ ಮೇಲೆ ಏಕ ಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿ ಪರಿಶೀಲಿಸುತ್ತಿದ್ದಾರೆ.