ಇಎನ್ಎಲ್ ಹುಬ್ಬಳ್ಳಿ: ಇಂದು ಶ್ರೀ ಸಿದ್ಧಾರೂಢ ಸ್ವಾಮಿ ಮಠದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಪರಮಪೂಜ್ಯಶ್ರೀ ಸಜಾನಂದ ಸ್ವಾಮಿಗಳು ಮಹಾಲಿಂಗಪುರ ಪೂಜ್ಯಶ್ರೀ ಗುರುನಾಥ ಮಹಾರಾಜರು ಸಂಘಧರಿ ಪೂಜ್ಯಶ್ರೀ ಸದಾಶಿವ ಗುರೂಜಿ ರನ್ನ ಬೆಳಗಲಿ ಪೂಜ್ಯ ಶ್ರೀ ಶಾಂತಾನಂದ ಸ್ವಾಮಿಗಳು ಇವರುಗಳನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಇದಾದ ನಂತರ ಸಂಜೆ 6:30 ಕ್ಕೆ ಸದ್ಗುರು ಸಿದ್ದಾರೂಢರ ಸಮಾಧಿ ಮಂದಿರದಲ್ಲಿ ಮೊಸರು ಗಡಿಗೆ (ಮಡಿಕೆ) ಒಡೆಯುವುದನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ವಿ ಶ್ರೀಶಾನಂದ್ ಇವರು ನೆರವೇರಿಸಿದರು ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿಯ ಚೇರ್ಮನರಾದ ಶ್ರೀ ಧರಣೇಂದ್ರ ಜವಳಿ ವೈಸ್ ಚೇರ್ಮನರಾದ ಡಾ.ಗೋವಿಂದ ಮನ್ನೂರ, ಗೌರವ ಕಾರ್ಯದರ್ಶಿಗಳಾದ ಶ್ರೀ ಎಸ್ ಐ ಕೋಳ್ಕೂರ್ ಧರ್ಮದರ್ಶಿಗಳಾದ ಶ್ರೀ ಮಹೇಶಪ್ಪ ಹನಗೋಡಿ ಜಗದೀಶ ಮಗಜಿಕೊಂಡಿ ಸೇರಿದಂತೆ ಉಪಸ್ಥಿತರಿದ್ದರೆಂದು ಶ್ರೀಮಠ ಪ್ರಕಟಣೆಗೆ ತಿಳಿಸಿದೆ.
previous post