ಇಎನ್ಎಲ್ ಹುಬ್ಬಳ್ಳಿ: ವಿಮಲ್ ಗುಟ್ಕಾ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ರೌಡಿಶೀಟರ್ ಹರಿತ ಆಯುಧದಿಂದ ವ್ಯಕ್ತಿಯೊಬ್ಬನನ್ನು ಇರಿದು ಕೊಲೆ ಮಾಡಿರುವ ಪ್ರಕರಣ ಸೋಮವಾರ ತಡರಾತ್ರಿ ಹಳೇ ಹುಬ್ಬಳ್ಳಿ ಆನಂದ ನಗರದಲ್ಲಿ ನಡೆದಿದೆ.
ರೌಡಿಶೀಟರ್ ಗೌಸ ಮೋದಿನ್ ತಹಶೀಲ್ದಾರ ಎಂಬಾತ ಮೆಹಬೂಬ ಸಾಬ ಕಳಸನಿಗೆ ಇರಿದು ಕೊಂದಿದ್ದಾನೆ.
ಗುಟಾಕ ತಿನ್ನುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ತನ್ನ ಬಳಿಯಲ್ಲಿ ಇದ್ದ ಹರಿತವಾದ ಆಯುಧದಿಂದ ಮೆಹಬೂಬ ಸಾಬ ಕಳಸ ಇತನಿಗೆ ಇರಿದಿದ್ದಾನೆ. ಗಾಯಗೊಂಡ ಕಳಸನನ್ನು ಉಪಚಾರಕ್ಕಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸ್ತೀವಿ ಎಂದು ಇದ್ದಿದ್ದು ಕಿತ್ಕೊಂಡ್ರು!
ಸ್ಥಳಕ್ಕೆ ಭೇಟಿ ನೀಡಿರುವ ಹಳೇ ಹುಬ್ಬಳ್ಳಿ ಪೊಲೀಸರು ಈ ಕುರಿತು ಯಾವುದೇ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ.