ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ಸೆ.29ರಂದು ಶುಕ್ರವಾರ ಸಂಘದ ಕಟ್ಟಡದಲ್ಲಿ ಜರುಗಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ವಹಿಸಿದ್ದರು. ಸಂಘದ 2022-23 ನೇಯ ಆಯ-ವ್ಯಯ ಹಾಗೂ ಅಢಾವೆ ಪತ್ರಿಕೆಯನ್ನು ಸಭೆಯಲ್ಲಿ ಮಂಡಿಸಿ ಒಪ್ಪಿಗೆಯನ್ನು ಪಡೆಯಲಾಯಿತು. ನಂತರ ಸಲಹಾ ಸಮಿತಿಯ ಹಿರಿಯರ ನಿರ್ಣಯದಂತೆ ಸಲಹಾ ಸಮಿತಿಯ ಅಧ್ಯಕ್ಷ ಜಗದೀಶಗೌಡ ಪಾಟೀಲ 2023-24 ಹಾಗೂ 2024-25 ನೇ ಸಾಲಿಗೆ ಸಂಘದ ನೂತನ ಪದಾಧಿಕಾರಿಗಳನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿ ಸರ್ವಾನುಮತದಿಂದ ಅಂಗೀಕರಿಸಿಲಾಯಿತು. ಅಧ್ಯಕ್ಷರು ರಾಜಕಿರಣ ಮೆಣಸಿನಕಾಯಿ, ಉಪಾಧ್ಯಕ್ಷರು ಅನೀಲ ಓಸ್ತವಾಲ, ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ, ಸಹ ಗೌರವ ಕಾರ್ಯದರ್ಶಿ ರವಿ ಮರದ,
ಈ ವೇಳೆ ಸಂಘದ ಮಾಜಿ ಮಾಜಿ ಅಧ್ಯಕ್ಷ ಜಗದೀಶಗೌಡ ಪಾಟೀಲ, ಗುರುಪಾದಪ್ಪ ಢಗೆ, ಎ.ಆರ್.ನದಾಫ, ಜಿ.ಆರ್. ಬೆಲ್ಲದ, ರಾಜಶೇಖರ ಬತ್ಲಿ, ಬಸವರಾಜ ಯಕಲಾಸಪೂರ, ಎಮ್.ಆರ್.ಮೇಲಗಿರಿ, ಪ್ರಭಣ್ಣ ಅಣ್ಣೆಪ್ಪನವರ, ಗುಂಡಪ್ಪ ಸಾವುಕಾರ, ರಾಜಶೇಖರ ಕುಂದಗೋಳ, ಸುರೇಶ ಓಸ್ತುವಾಲ, ಮಂಜುನಾಥ ಉಪ್ಪಿನ, ಶಿವಯೋಗಿ ಹೊಸಕಟ್ಟಿ, ಮೋಹನ ಸೋಳಂಕಿ, ವಿ.ಎನ್.ಭಂಡಾರಕರ, ಪ್ರಮೋದ ಸೋಳಂಕಿ, ಚಂದ್ರಶೇಖರ ಪೂಜಾರ ಮುಂತಾದವರು ಉಪಸ್ಥಿತರಿದ್ದು, ಶುಭ ಕೋರಿದರು.
ಈ ಸಭೆಯಲ್ಲಿ ವ್ಯಾಪಾರಸ್ಥರ ಸಂಘದ ಸದಸ್ಯ ಹಾಗೂ ಹುಧಾಮಪಾ ಸದಸ್ಯ ರಾಜಣ್ಣ ಕೊರವಿ ಅವರನ್ನು ಸಂಘದಿoದ ಸನ್ಮಾನಿಸಲಾಯಿತು.