ಇಎನ್ಎಲ್ ಹುಬ್ಬಳ್ಳಿ: ಧಾರವಾಡ ತಾಲೂಕಿನ ಹೊಸ ಯಲ್ಲಾಪುರ ಗ್ರಾಮದ ಜಮೀನಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೂದನೆ ಪಡೆಯದೆ ನಿರ್ಮಿಸಲಾಗಿರುವ ಅನಧಿಕೃತ ವಿನ್ಯಾಸ ಹಾಗೂ ನಿವೇಶನಗಳನ್ನು ಜ.28 ಹಾಗೂ 29 ರಂದು ತೆರವು ಮಾಡಲಾಗುವುದು. ಈ ಕುರಿತು ಜಮೀನು ಮಾಲಿಕರಿಗೆ ನೋಟಿಸ್ ನಿಡಲಾಗಿದೆ.
ಸ್ವಇಚ್ಛೆಯಿಂದ ವಿನ್ಯಾಸ ರದ್ದುಪಡಿಸದಿದ್ದರೆ ನಗರಾಭಿವೃದ್ಧಿ ಪ್ರಾಧಿಕಾರ, ಪೊಲೀಸ್ ರಕ್ಷಣೆಯೊಂದಿಗೆ ಜಮೀನಿನಲ್ಲಿರುವ ವಿನ್ಯಾಸ, ನಿವೇಶನದ ಕಲ್ಲುಗಳನ್ನು ತೆರವುಗೊಳಿಸಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.