ಹುಬ್ಬಳ್ಳಿ : ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಆವರಣದಲ್ಲಿ ನಟ ಪುನೀತ್ ರಾಜಕುಮಾರಗೆ ಅಶ್ರುತರ್ಪಣ ಅರ್ಪಿಸಿದ ತೂಗುದೀಪ ದರ್ಶನ ಅಭಿಮಾನಿಗಳು. ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕೊಡಲಿ ಎಂದು ಭಾವುಕರಾದ ಅಭಿಮಾನಿಗಳು. ಈ ಸಂದರ್ಭದಲ್ಲಿ ತೂಗುದೀಪ ದರ್ಶನ ಅಭಿಮಾನಿಗಳ ಸಂಘದ ಉತ್ತರ ಕರ್ನಾಟಕದ ಅಧ್ಯಕ್ಷ ರಾಜಣ್ಣ ಕುನ್ನೂರ, ಧಾರವಾಡ ಜಿಲ್ಲಾಧ್ಯಕ್ಷ ಗೋಪಾಲ ಯನಚವಂಡಿ, ಉಪಾಧ್ಯಕ್ಷ ಗಂಗಾಧರ ಅಮ್ಮನವರ,ಲೆಕ್ಕ ಪರಿಶೋಧಕ ಈಶ್ವರ ಹೂಗಾರ, ಹರಿದರ್ಶನ ಹಾಗೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.