ಇಎನ್ಎಲ್ ಡೆಸ್ಕ್
ಇಡುಕ್ಕಿ: ಮದುವೆಯಾಗಲ್ಲ ಎಂದಿದ್ದಕ್ಕೆ ಕೋಪಗೊಂಡ ಮಹಿಳೆ ಯುವಕನ ಮೇಲೆ ಆಸಿಡ್ ಎರಚಿದ ಘಟನೆ ಕೇರಳದಲ್ಲಿ ನಡೆದಿದೆ. ಯುವಕ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾನೆ.
ಎರಡು ಮಕ್ಕಳ ತಾಯಿ 35 ವರ್ಷದ ಶೀಬಾ ಎಂಬಾಕೆ ತಿರುವನಂತಪುರಂನ ಪೂಜಾಪುರ ಮೂಲದ 27 ವರ್ಷದ ವ್ಯಕ್ತಿಗೆ ನ.16ರಂದು ಆಸಿಡ್ ಎರಚಿದ್ದಾಳೆ.
ದಾಳಿಗೆ ಒಳಗಾದ ಸಂತ್ರಸ್ತ ಅರುಣ್ ಕುಮಾರ್ ಅವರು ತಿರುವನಂತಪುರಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.