23.3 C
Hubli
ಮೇ 8, 2024
eNews Land
ಆರೋಗ್ಯ

ಉಚಿತ ನೇತ್ರ ತಪಾಸಣೆ ಶಿಬಿರ

ಇಎನ್ಎಲ್ ಹುಬ್ಬಳ್ಳಿ;

ಪಿಯಾಗಿಯೋ ಅನಮೋಲ್ ದೃಷ್ಟಿ ಸೇವಾಭಾರತಿ ಟ್ರಸ್ಟ್ ಹಾಗೂ ಚಂದ್ರಶೇಖರ ಗೋಕಾಕ ಸಂಚಾಲಿತ ಜ್ಞಾನಗಂಗಾ ಸಂಸ್ಥೆ ವತಿಯಿಂದ, ಹುಬ್ಬಳ್ಳಿ ನಗರದ ವ್ಯಾಪ್ತಿಯಲ್ಲಿ ಬರುವ ಆಟೋ ಚಾಲಕರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣಾ ಶಿಬಿರ ಇಂದು ನಡೆಯಿತು.ಒಟ್ಟು 200 ಆಟೋ ಚಾಲಕರು ಈ ಶಿಬಿರದ ಸದುಪಯೋಗ ಪಡೆದುಕೊಂಡರು. ಕಾರ್ಯಕ್ರಮದ ಸಾನಿಧ್ಯವನ್ನು ರುದ್ರಾಕ್ಷಿಮಠದ ಬಸವಲಿಂಗಾನಂದ ಶ್ರೀ ಕಾರ್ಯಕ್ರಮದ ನೇತೃತ್ವವನ್ನು ಜ್ಞಾನಗಂಗಾದ ಮುಖ್ಯಸ್ಥ ಚಂದ್ರಶೇಖರ ಗೋಕಾಕ ಅವರು ವಹಿಸಿದ್ದರು.ಸೇವಾಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗೋವರ್ಧನರಾವ್, ಸಂಜೀವ ಕುಲಕರ್ಣಿ, ಡಾ.ತೃಪ್ತಿ, ಡಾ.ರವೀಂದ್ರ ಏಲಕಾನ ಹಾಗೂ ಎಮ್ ಎಮ್ ಜೋಶಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಧಾರವಾಡ: ಎಸ್ಡಿಎಂ ಕಾಲೇಜಿನ 66 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

eNewsLand Team

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

eNewsLand Team

ಎಸ್ ಡಿ ಎಂ: ಮತ್ತೆ 116 ಜನರಲ್ಲಿ ಕೋವಿಡ್ ಸೋಂಕು

eNewsLand Team