34 C
Hubli
ಮಾರ್ಚ್ 23, 2023
eNews Land
ಜಿಲ್ಲೆ

ಮನೆ ಹಾನಿ ವಿವರ ದಾಖಲಿಸಲು ಡಿ.12ರವರೆಗೆ ಅವಕಾಶ

Listen to this article

ಹಿಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿ : ವಿಮಾ ಪರಿಹಾರ ಪಡೆಯಲು ಅವಕಾಶ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಇಎನ್ಎಲ್ ಧಾರವಾಡ: 
ನವೆಂಬರ್ ತಿಂಗಳಿನಲ್ಲಿಯೂ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿದ ಕಾರಣ , ಮನೆ ಹಾನಿಯಾದ ಪಕರಣಗಳ ವಿವರಗಳನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ (RGRHCL) ತಂತ್ರಾಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲು ಅವಧಿಯನ್ನು ಸರ್ಕಾರ ಡಿ. 7ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ . ಈ ಕಾಲಮಿತಿಯೊಳಗೆ ಮನೆ ಹಾನಿಯಾದ ಪ್ರಕರಣಗಳ ವಿವರಗಳನ್ನು ತಂತ್ರಾಶದಲ್ಲಿ ಹಾಗೂ ಬೆಳೆ ಹಾನಿಯ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಿಯಮಾನುಸಾರ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಖಲಿಸಬೇಕು ಎಂದು ಕೈಮಗ್ಗ,ಜವಳಿ,ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮನೆ ಹಾನಿಗೊಳಗಾದ ಪ್ರಕರಣಗಳನ್ನುಸಮೀಕ್ಷೆ ಮಾಡಿ ಎ,ಬಿ ಹಾಗೂ ಸಿ ಎಂದು ವರ್ಗೀಕರಿಸಿ ದಾಖಲಿಸುವ ಕಾರ್ಯ ಸಮರ್ಪಕವಾಗಿ ಜರುಗಬೇಕು.ಜಿಲ್ಲೆಯ ಜನತೆ ಈ ಕಾಲಾವಕಾಶದ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದ್ದಾರೆ.

ಪ್ರಸಕ್ತ 2021 ರ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಬೆಳೆಗಳು ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳು, ಸ್ಥಳೀಯ ಗಂಡಾಂತರಗಳಿಂದ ಹಾನಿಯಾದರೆ.ಬೆಳೆ ವಿಮೆ ಮಾಡಿಸಿರುವ ರೈತರು ಈ ಕುರಿತು ನೇರವಾಗಿ ಸಂಬಂಧಪಟ್ಟ ವಿಮಾ ಸಂಸ್ಥೆಗಳ ಕಚೇರಿಗಳಿಗೆ , ಹಣಕಾಸು ಸಂಸ್ಥೆ ( ಬ್ಯಾಂಕ್),ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಮೂಲಕ ತಕ್ಷಣ ಮಾಹಿತಿ ನೀಡಬೇಕು . ವಿಮೆ ಮಾಡಿಸಿದ ಬೆಳೆಯ ವಿವರಗಳು , ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಗಳೊಳಗಾಗಿ ಮಾಹಿತಿ ನೀಡಬೇಕು.ಜಿಲ್ಲೆಯ ರೈತರು ನಿಗದಿತ ಕಾಲಾವಧಿಯೊಳಗೆ ಅಂದರೆ ಮಳೆಯಿಂದ ಹಾನಿಯಾದ 72 ಗಂಟೆಗಳೊಳಗೆ ಮಾಹಿತಿ ನೀಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

Related posts

ಹುಬ್ಬಳ್ಳಿ ಪತ್ರಕರ್ತರ ಆಫೀಸ್ ಪರೇಡ್ ಹೇಗಿದೆ ಗೊತ್ತಾ?? ಮಾತನಾಡಿಸದವರೂ ಗುಡ್ ಮಾರ್ನಿಂಗ್ ಅಂತಿದ್ದಾರೆ!!

eNEWS LAND Team

ಹುಬ್ಬಳ್ಳಿಗೂ ಕಾಲಿಟ್ಟ ಹಿಜಾಬ್ ವಿವಾದ: ಪ್ರತಿಭಟನೆ

eNewsLand Team

ಮಹಿಳೆ ಮೇಲೆ ಚಿರತೆ ದಾಳಿ

eNEWS LAND Team