ಇಎನ್ಎಲ್ ಹುಬ್ಬಳ್ಳಿ
ನೀರಸಾಗರ ನೀರು ಸರಬರಾಜು ಯೋಜನೆಯಡಿ ದುಮ್ಮವಾಡದಿಂದ ಕಣವಿಹೊನ್ನಾಪುರದ ನೀರು ಶುದ್ಧೀಕರಣ ಘಟಕದವರೆಗಿನ 762 ಮಿಲಿ ಮೀಟರ್ ವ್ಯಾಸದ ಏರುಕೊಳವೆ ಮಾರ್ಗದಲ್ಲಿ ಝೀರೊ ವೆಲಾಸಿಟಿ ವಾಲ್ವಗಳನ್ನು ಅಳವಡಿಸುವ ಕಾಮಗಾರಿಯನ್ನು ಜನೇವರಿ 4 ರಂದು ಕೈಗೊಳ್ಳಲಾಗುತ್ತಿದೆ. ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಬಡಾವಣೆಗಳು ಹಾಗೂ ಹಳೇ ಹುಬ್ಬಳ್ಳಿ ಭಾಗಗಳಿಗೆ ಜನೇವರಿ 4 ಮತ್ತು 5 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ವಿಳಂಬವಾಗಿ ನೀರು ಪೂರೈಕೆ ಮಾಡಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಕೆಯುಐಡಿಎಫಸಿ ಯೋಜನಾ ಅನುಷ್ಠಾನ ಘಟಕ ಕುಸ್ಸೆಂಪ್ ಯೋಜನೆಯ ಅಧೀಕ್ಷಕ ಅಭಿಯಂತರಾದ ಎಂ.ಕೆ. ಮನಗೊಂಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.