36 C
Hubli
ಏಪ್ರಿಲ್ 24, 2024
eNews Land
ಜಿಲ್ಲೆ ರಾಜ್ಯ

ಧಾರವಾಡ: 26ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ

ಇಎನ್ಎಲ್ ಧಾರವಾಡ:

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ 26ನೇಯ ಯುವಜನೋತ್ಸವ ಜರುಗುತ್ತಿದ್ದು,  ಕಾರ್ಯಕ್ರಮಗಳ ಶಿಸ್ತುಬದ್ದ ಆಯೋಜನೆಗೆ ಜಿಲ್ಲಾಡಳಿತ ಸಂಭ್ರಮದಿಂದ ಬರದ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಅವರು ಇಂದು ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಯುವಜನೋತ್ಸವದ ಸಿದ್ಧತೆ ಕುರಿತು ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮಾತನಾಡಿದರು.
ರಾಷ್ಟ್ರೀಯ ಯುವಜನೋತ್ಸವದ ಯಶಸ್ವಿಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಸತಿ, ಊಟ, ಸಾರಿಗೆ, ವೇದಿಕೆ ಸೇರಿದಂತೆ ವಿವಿಧ ಕಾರ್ಯಗಳ ಕುರಿತು 17ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿ, ಕಾರ್ಯಗಳ ಹಂಚಿಕೆ ಮಾಡಲಾಗಿದೆ.
ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಯನ್ನು ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುವರು. ಉದ್ಘಾಟನಾ ಕಾರ್ಯಕ್ರಮವು ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಜರುಗುವುದು.

ಜನವರಿ 13 ರಿಂದ 16 ರವರೆಗೆ ವಿವಿಧ ರೀತಿಯ ಸ್ಪರ್ಧೇಗಳು ಧಾರವಾಡ ನಗರದ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಯುವಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಯುವಜನೋತ್ಸವದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಸುಮಾರು 7,500 ಜನ ಯುವ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಪ್ರತಿನಿಧಿಗಳಗೆ, ಯೋಗಾ ಮ್ಯಾಟ್, ಧಾರವಾಡ ಪೇಢಾ, ಗರಗ ಖಾದಿ ಕೇಂದ್ರದಿಂದ ರಾಷ್ಟ್ರಧ್ವಜವಿರುವ ಒಂದು ಪ್ರೇಮ್ ಕೊಡಲು ತೀರ್ಮಾನಿಸಿದ್ದು ಈ ಎಲ್ಲ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಕಂಪನಿಗಳು ಪ್ರಾಯೋಜಕತ್ವವಹಿಸಿಕೊಳ್ಳುತ್ತಿವೆ.ಈ ಮೂಲಕ ಧಾರವಾಡ ಬ್ರ್ಯಾಂಡ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.

ಯುವಜನೋತ್ಸವಕ್ಕೆ ಆಗಮಿಸುವ ಸ್ಪರ್ಧಾಳು ಮತ್ತು ಅತಿಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ವಿವಿಧ ವಿದ್ಯಾರ್ಥಿನಿಲಯ ಹಾಗೂ ಹೊಟೇಲ್‍ಗಳಲ್ಲಿ ಮಾಡಲಾಗುತ್ತಿದೆ. ಉತ್ತಮ ಮತ್ತು ಸಕಾಲಿಕ ಸಾರಿಗೆಯನ್ನು ಮಾಡಲು ಖಾಸಗಿ ಶಾಲಾ ಕಾಲೇಜುಗಳ ಬಸ್‍ಗಳನ್ನು ಪಡೆಯಲಾಗುತ್ತಿದೆ. ಯುವಜನೋತ್ಸವ ಕಾಲೇಜ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವುದರಿಂದ ಆಯಾ ವಿಶ್ವವಿದ್ಯಾಲಯಗಳು ಮತ್ತು ಶಾಲಾ-ಕಾಲೇಜುಗಳಿಗೆ ಯುವಜನೋತ್ಸವ ಅವಧಿಯಲ್ಲಿ ರಜೆ ಘೋಷಿಸಲು ಕ್ರಮಕೈಗೋಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹು-ಧಾ ಅವಳಿನಗರದ ಎಲ್ಲ ಸರಕಾರಿ ಕಚೇರಿಗಳಿಗೆ ಒಂದು ವಾರಗಳ ಕಾಲ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ಅವಳಿನಗರದ ಮುಖ್ಯ ರಸ್ತೆಗಳು, ಪ್ರವಾಸಿ ಸ್ಥಳಗಳನ್ನು ವೈಭವೀಕರಿಸಲಾಗುತ್ತಿದೆ. ಮಹಾನಗರದ ಮುಖ್ಯ ರಸ್ತೆಗಳು, ಉದ್ಯಾನವನಗಳು, ಸಾಂಸ್ಕøತಿಕ ಸ್ಥಳಗಳನ್ನು ಶೃಂಗರಿಸಲಾಗುತ್ತಿದೆ. ಒಟ್ಟಾರೆಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಒಂದು ವಾರಗಳ ಕಾಲ ಹಬ್ಬದ ವಾತಾವರಣ ಮೂಡುವಂತೆ ಮಾಡಲು ಕ್ರಮ ಕೈಕೊಳ್ಳಲಾಗುತ್ತಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಯುವಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಒಂದು ಕಂಟ್ರೋಲ್ ರೂಂ ಪ್ರಾರಂಭಿಸಿ, ಅಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ. ಅಗತ್ಯ ಮಾಹಿತಿಯನ್ನು ತಕ್ಷಣ ಪೂರೈಸಲು ಮತ್ತು ಬೇಡಿಕೆಗಳಿಗೆ ಸ್ಪಂದಿಸಲು ಇದು ಸಹಾಯವಾಗಲಿದೆ ಎಂದರು.

ಈ ಕಾರ್ಯಕ್ರಮದ ಆಯೋಜನೆಗೆ ಮಹಾನಗರದ ಸಾಕಷ್ಟು ಜನ ಗಣ್ಯವ್ಯಕ್ತಿಗಳು, ಕೈಗಾರಿಕೋದ್ಯಮಿಗಳು, ಸಂಸ್ಥೆಗಳು, ಬೇಲೂರು ಕೈಗಾರಿಕಾ ವಸಾಹತುವಿನಲ್ಲಿರುವ ಕೈಗಾರಿಕೆಗಳ ಮಾಲೀಕರು ಹೆಚ್ಚಿನ ಪ್ರಮಾಣದಲ್ಲಿ ಪ್ರಾಯೋಜಕತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇಂಡಿಯನ್ ಆಯಿಲ್ ಕಾಪೆರ್Çೀರೇಶನ್ ಲಿ., ಯುಪ್ಲೆಕ್ಸ್, ಏಕಸ್, ಆರ್.ಎಸ್.ಬಿ.ಟ್ರಾನ್ಸಮಿಷನ್, ಎಡಿಎಂ ಅಗ್ರೋ, ಟ್ರೋಪಿಕೂಲ್ ಫುಡ್ಸ್, ಕೆನ್ ಅಗ್ರಿಟೆಕ್, ದಾನಾ ಆನಂದ ಇಂಡಿಯಾ, ಯೂನಿಅಬೆಕ್ಸ್, ಎಕ್ಸೆಲ್ ಫುಡ್ಸ್, ಹುಬ್ಬಳ್ಳಿ-ಧಾರವಾಡ ಚೇಂಬರ ಆಪ್ ಕಾಮರ್ಸ, ಭಾರತ ಭುಟೆಕ್, ಪ್ರವಾಸೋದ್ಯಮ ಇಲಾಖೆ ಈ ರೀತಿ ಇನ್ನಿತರ ಕೆಲವು ಕಂಪನಿಗಳೂ ಸಹ ಪ್ರಾಯೋಜಕತ್ವವಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಮಹಾನಗರದ ಹೊಟೆಲ್ ಒಡೆಯವರ ಸಂಘದವರು, ಆಗಮಿಸುವ ಗಣ್ಯವ್ಯಕ್ತಿಗಳಿಗೆ, ಅತಿಥಿಗಳಿಗೆ, ರಿಯಾಯತಿ ದರದಲ್ಲಿ ಕೊಠಡಿಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಸಾಂಸ್ಕøತಿಕ ಸಮಿತಿಯನ್ನು ರಚಿಸಲಾಗಿದೆ. ಆಸಕ್ತ ಸ್ಥಳೀಯ ಕಲಾವಿದರು. ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು. ಕಲಾವಿದರು ತಮ್ಮ ಕಿರುಪರಿಚಯ, ಹಾಗೂ ಹಿಂದಿನ ಪ್ರದರ್ಶನಗಳ ಕಿರು ವಿಡಿಯೋಗಳನ್ನು ಇಮೇಲ್ ವಿಳಾಸ nyfculcommittee2023@gmail.com ಮುಖಾಂತರ ಸಾಂಸ್ಕøತಿಕ ಸಮಿತಿಗೆ ಕಳುಹಿಸಬಹುದಾಗಿದೆ. ಮತ್ತು ಯುವಜನೋತ್ಸವದ ಕುರಿತು ಸಾಮಾಜಿಕ ಜಾಲತಾಣಗಳನ್ನು ಬಳಸಿ ಕಾರ್ಯಕ್ರಮಗಳ ನೇರ ಪ್ರಸಾರ ರಾಷ್ಟ್ರಾದ್ಯಂತ ನಡೆಯಲಿದೆ ಇದಕ್ಕಾಗಿ ಸಾಮಾಜಿಕ ಜಾಲತಾಣ ಮಾಧ್ಯಮ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಅವಳಿ ನಗರಗಳ ರಸ್ತೆ ರಿಪೇರಿ ಕಾರ್ಯ ನಡೆಯಲಿದ್ದು, ಲೋಕೋಪಯೋಗಿ ಇಲಾಖೆಗೆ 3.8 ಕೋಟಿ ರೂ. ಬಿಡುಗಡೆಯಾಗಿದೆ. ಧಾರವಾಡದ ವಿವಿಧ ಉದ್ಯಾನವನಗಳ ಹಸರೀಕರಣ ಕಾರ್ಯ ನಡೆಯುತ್ತಿದೆ. ಅವಳಿನಗರಗಳ ಪರಿಸರ ವ್ಯವಸ್ಥೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಾಧನಕೇರಿ, ಕೇಲಗೇರಿ ಸೇರಿದಂತೆ ಪ್ರಮುಖ 6 ಕೆರೆಗಳನ್ನು ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯು ಶೀಘ್ರವೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಯುವಜನೋತ್ಸವ ಸ್ಪರ್ಧೆ ಮತ್ತು ನಡೆಯುವ ಸ್ಥಳಗಳು : ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಪ್ರತಿ ದಿನ ಉತ್ಸಾಹ ಮತ್ತು ಉಲ್ಲಾಸದಿಂದ ಭಾಗವಹಿಸಲು ಅನುಕೂಲವಾಗುವಂತೆ ಅವರು ವಾಸಿಸುವ ವಸತಿ ನಿಲಯಗಳ ಸಮಿಪದ ಮೈದಾನದಲ್ಲಿ ಯೋಗ ಮತ್ತು ದ್ಯಾನ ಮಾಡಲು (ಮೈಂಡಫುಲ್ ನೆಸ್) ಅವಕಾಶ ಮಾಡಲಾಗಿದೆ.

ಜನಪದ ನೃತ್ಯ: ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಕೆಸಿಡಿಯ ಸೃಜನಾ ರಂಗಮಂದಿರದಲ್ಲಿ ನಡೆಯಲಿದೆ. ಜನಪದ ಗೀತೆ: ಕೃ.ವಿ.ವಿ.ಆಡಿಟೋರಿಯಂದಲ್ಲಿ ನಡೆಯಲಿವೆ.

ಯುವ ಸಮ್ಮೇಳನ: ಕೃಷಿ ವಿಶ್ವವಿದ್ಯಾಲಯ ಆಡಿಟೋರಿಯಂದಲ್ಲಿ ನಡೆಯಲಿದೆ.

ಯುವ ಕಲಾವಿದರ ಮೇಳ: ಕರ್ನಾಟಕ ವಿಶ್ವವಿದ್ಯಾಲಯದ ಹಸಿರು ಉದ್ಯಾನವನದಲ್ಲಿ ಜರುಗಲಿದೆ.
ಯುವ ಕೃತಿ ಮತ್ತು ಆಹಾರ ಮೇಳ: ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪುಟ್‍ಬಾಲ್ ಮೈದಾನದಲ್ಲಿ ಜರುಗಲಿವೆ. ಮತ್ತು ಸಾಹಸ ಕ್ರೀಡೆಗಳು ಕೆಲಗೇರಿ ಕೆರೆಯಲ್ಲಿ ನಡೆಯಲಿವೆ.
ದೇಶಿಯ ಕ್ರೀಡಾ ಸ್ಪರ್ಧೆಗಳು ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಮೈದಾನದಲ್ಲಿ ಮತ್ತು ಸಂಸ್ಕøತಿಕ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ 5 ರಿಂದ 9 ಗಂಟೆಯವರೆಗೆ ಕರ್ನಾಟಕ ಕಾಲೇಜು ಮೈದಾನ ಮತ್ತು ಸೃಜನಾ ರಂಗಮದಿಂರದಲ್ಲಿ ಸಂಜೆ 7 ರಿಂದ 9 ಗಂಟೆಯ ವರೆಗೆ ನಡೆಯಲಿವೆ.

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಪ್ರತಿ ಕ್ಷಣಗಳನ್ನು ಆನಂದಿಸಿ, ಐತಿಹಾಸಿಕಗೊಳಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಾಧ್ಯಮ, ಸಂಘ, ಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕಾರ ನೀಡಿ ಯಶಸ್ವಿಗೆ ಸಹಕರಿಸಬೇಕೆಂದು ಜಿಲ್ಲಾದಿಕಾರಿಗಳು ತಿಳಿಸದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಉಪವಿಭಾಗಾಧಿಕಾರಿ ಅಶೋಕ ತೆಲಿ ಇದ್ದರು.

Related posts

ರಾಜಾಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಬೃಹತ್ ಯೋಜನೆ : ಸಿಎಂ

eNEWS LAND Team

ಬೈಪಾಸ್ ರಸ್ತೆ ಅಗಲೀಕರಣ ಕಾಲಮಿತಿಯೊಳಗೆ ಕಾಮಗಾರಿ-ಸಚಿವ ಹಾಲಪ್ಪ ಆಚಾರ್

eNewsLand Team

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಸಿಎಂ ಬೊಮ್ಮಾಯಿ ಮನವಿ

eNewsLand Team