29 C
Hubli
ಸೆಪ್ಟೆಂಬರ್ 26, 2023
eNews Land
ಅಪರಾಧ ಆರ್ಥಿಕತೆ

ಷೇರ್ ಮಾರ್ಕೆಟ್ ಹೆಸರಲ್ಲಿ ಲಕ್ಷ ಲಕ್ಷ ಪಂಗನಾಮ: ಕಣ್ಣೀರಲ್ಲಿ ಕೈ ತೊಳೆಯೊ ಸ್ಥಿತಿ!!

ಇಎನ್ಎಲ್ ಧಾರವಾಡ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ಗೋಪನಕೊಪ್ಪದ ಸ್ಮೀತಾ ಜಮಾದಾರ ಅವರಿಗೆ ನಂಬಿಸಿದ ಮೂವರು, ₹21 ಲಕ್ಷ ವಂಚನೆ ಮಾಡಿದ್ದಾರೆ.

ಪತಿಯ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದ ಸುಮಿತಾ ಅವರಿಗೆ ಪರಿಚಯಯವಿದ್ದ ಅಕ್ಕಮ್ಮ ರೆಡ್ಡಿಯಿಂದ ಬೆಳಗಾವಿಯ ಶಿವಪುತ್ರಯ್ಯ ಹಿರೇಮಠ ಪರಿಚಯವಾಗಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಬರುತ್ತದೆ ಎಂದು ನಂಬಿಸಿ, ₹3ಲಕ್ಷ ಚೆಕ್‌ ಮೂಲಕ ಪಡೆದಿದ್ದನು. ನಂತರ ಅಕ್ಕಮ್ಮರೆಡ್ಡಿ ಜೊತೆ ಜಾಹೀದಾ ಬೇಗಂ ಎಂಬವಳು ಸೇರಿಕೊಂಡು ಮತ್ತೆ ಹಣ ಹೂಡಿಕೆ ಮಾಡಲು ₹18 ಲಕ್ಷವನ್ನು ಫೋನ್‌ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಷೇರು ಮಾರುಕಟ್ಟೆಗೆ ಹಣವೂ ಹಾಕದೆ, ಮರಳಿಯೂ ನೀಡದೆ ವಂಚಿಸಿದ್ದಾರೆ ಎಂದು ವೃದ್ಧೆ ಸ್ಮೀತಾ ಮೂವರ ವಿರುದ್ಧ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related posts

ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

eNEWS LAND Team

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

eNewsLand Team

ಬಿಟ್ ಕಾಯಿನ್: ಕಾಂಗ್ರೆಸ್ ಇಲ್ಲದ ವಿವಾದವನ್ನು ಜೀವಂತವಾಗಿಡಲು ಪ್ರಯತ್ನಿಸಿದೆ

eNEWS LAND Team