ಇಎನ್ಎಲ್ ಧಾರವಾಡ
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟಾಗುತ್ತದೆ ಎಂದು ಗೋಪನಕೊಪ್ಪದ ಸ್ಮೀತಾ ಜಮಾದಾರ ಅವರಿಗೆ ನಂಬಿಸಿದ ಮೂವರು, ₹21 ಲಕ್ಷ ವಂಚನೆ ಮಾಡಿದ್ದಾರೆ.
ಪತಿಯ ಪಿಂಚಣಿ ಹಣದಿಂದ ಜೀವನ ನಡೆಸುತ್ತಿದ್ದ ಸುಮಿತಾ ಅವರಿಗೆ ಪರಿಚಯಯವಿದ್ದ ಅಕ್ಕಮ್ಮ ರೆಡ್ಡಿಯಿಂದ ಬೆಳಗಾವಿಯ ಶಿವಪುತ್ರಯ್ಯ ಹಿರೇಮಠ ಪರಿಚಯವಾಗಿದ್ದಾನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಬರುತ್ತದೆ ಎಂದು ನಂಬಿಸಿ, ₹3ಲಕ್ಷ ಚೆಕ್ ಮೂಲಕ ಪಡೆದಿದ್ದನು. ನಂತರ ಅಕ್ಕಮ್ಮರೆಡ್ಡಿ ಜೊತೆ ಜಾಹೀದಾ ಬೇಗಂ ಎಂಬವಳು ಸೇರಿಕೊಂಡು ಮತ್ತೆ ಹಣ ಹೂಡಿಕೆ ಮಾಡಲು ₹18 ಲಕ್ಷವನ್ನು ಫೋನ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಷೇರು ಮಾರುಕಟ್ಟೆಗೆ ಹಣವೂ ಹಾಕದೆ, ಮರಳಿಯೂ ನೀಡದೆ ವಂಚಿಸಿದ್ದಾರೆ ಎಂದು ವೃದ್ಧೆ ಸ್ಮೀತಾ ಮೂವರ ವಿರುದ್ಧ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.