24 C
Hubli
ಸೆಪ್ಟೆಂಬರ್ 27, 2023
eNews Land
ಅಪರಾಧ

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

ಇಎನ್ಎಲ್ ಹುಬ್ಬಳ್ಳಿ:

ಧಾರವಾಡದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಮೂಲಕ ಪರಿಚಯವಾಗಿ ಅವರ ಜಂಗಲ್‌ಫುಡ್ ಕಂಪನಿಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯಾದ ಆರೋಹನ್ಸ್ ಕಂಪನಿಯವರಿಂದ ಹಣ ಹೂಡಿಕೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ಕೆ 4 ಲಕ್ಷ ವಂಚಿಸಿದ್ದ ಪ್ರಕರಣದ ಆರೋಪಿಯನ್ನು ಹುಬ್ಬಳ್ಳಿ ಸಿಐಎನ್ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ಆರೋಪಿ ಪ್ರತಿಷ್ಠಿತ ಕಂಪನಿಯ ಸಂಸ್ಥಾಪಕರ ಹೆಸರಿನಲ್ಲಿ ಬೊಟ್ಟಿಯಾಗಿ ಈ-ಮೇಲ್ ಖಾತೆ ತೆರೆದು ಉದ್ಯಮಿಯೊಂದಿಗೆ ಸಂಪರ್ಕ ಬೆಳೆಸಿ, ಹೂಡಿಕೆಯ ವ್ಯವಹಾರವನ್ನು ಕುದುರಿಸಿದ್ದ. ಹಲವಾರು ಚಾರ್ಜ್‌ಗಳಿಗೆ ಹಂತ ಹಂತವಾಗಿ ಆನ್‌ಲೈನ್ ಮತ್ತು ನಗದು ರೂಪದಲ್ಲಿ ಒಟ್ಟು 4,17,844 ವರ್ಗಾವಣೆ ಮಾಡಿಸಿಕೊಂಡಿದ್ದ. ಬಳಿಕ ಉದ್ಯಮಿಯ ಕಂಪನಿಗೆ ಯಾವುದೇ ಹೂಡಿಕೆ ಮಾಡಿಸದೆ ತಲೆಮರೆಸಿಕೊಂಡಿದ್ದ.

ಈ ಬಗ್ಗೆ ನ. 19ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸ್ ಇನಸ್ಪೆಕ್ಟರ್ ಎಂ. ಎಸ್. ಹೂಗಾರ ಮತ್ತು ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

eNEWS LAND Team

ಮನುಷ್ಯನಿಗೆ‌ ಹೇಗೆಲ್ಲಾ ಸಾವು ಬರಬಹುದು? ಕಲಘಟಗಿಯಲ್ಲಿ ಬರ್ಬರವಾಗಿ ಅಪ್ಪಳಿಸಿದ ಮೃತ್ಯು!!

eNewsLand Team

ರೈತರಿಗೆ ‘ಗಂಧ’ ಹಚ್ಚಿ ‘ನಾಮ’ ಹಾಕಿದ ವಂಚಕರು ! 

eNEWS LAND Team