24 C
Hubli
ಮಾರ್ಚ್ 29, 2024
eNews Land
ಅಪರಾಧ

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

ಇಎನ್ಎಲ್ ಹುಬ್ಬಳ್ಳಿ:

ಧಾರವಾಡದ ಉದ್ಯಮಿಯೊಬ್ಬರಿಗೆ ವಾಟ್ಸಪ್ ಮೂಲಕ ಪರಿಚಯವಾಗಿ ಅವರ ಜಂಗಲ್‌ಫುಡ್ ಕಂಪನಿಯಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯಾದ ಆರೋಹನ್ಸ್ ಕಂಪನಿಯವರಿಂದ ಹಣ ಹೂಡಿಕೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿ ಕೆ 4 ಲಕ್ಷ ವಂಚಿಸಿದ್ದ ಪ್ರಕರಣದ ಆರೋಪಿಯನ್ನು ಹುಬ್ಬಳ್ಳಿ ಸಿಐಎನ್ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ಆರೋಪಿ ಪ್ರತಿಷ್ಠಿತ ಕಂಪನಿಯ ಸಂಸ್ಥಾಪಕರ ಹೆಸರಿನಲ್ಲಿ ಬೊಟ್ಟಿಯಾಗಿ ಈ-ಮೇಲ್ ಖಾತೆ ತೆರೆದು ಉದ್ಯಮಿಯೊಂದಿಗೆ ಸಂಪರ್ಕ ಬೆಳೆಸಿ, ಹೂಡಿಕೆಯ ವ್ಯವಹಾರವನ್ನು ಕುದುರಿಸಿದ್ದ. ಹಲವಾರು ಚಾರ್ಜ್‌ಗಳಿಗೆ ಹಂತ ಹಂತವಾಗಿ ಆನ್‌ಲೈನ್ ಮತ್ತು ನಗದು ರೂಪದಲ್ಲಿ ಒಟ್ಟು 4,17,844 ವರ್ಗಾವಣೆ ಮಾಡಿಸಿಕೊಂಡಿದ್ದ. ಬಳಿಕ ಉದ್ಯಮಿಯ ಕಂಪನಿಗೆ ಯಾವುದೇ ಹೂಡಿಕೆ ಮಾಡಿಸದೆ ತಲೆಮರೆಸಿಕೊಂಡಿದ್ದ.

ಈ ಬಗ್ಗೆ ನ. 19ರಂದು ಪ್ರಕರಣ ದಾಖಲಾಗಿತ್ತು. ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸ್ ಇನಸ್ಪೆಕ್ಟರ್ ಎಂ. ಎಸ್. ಹೂಗಾರ ಮತ್ತು ಸಿಬ್ಬಂದಿ ತಂಡದ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

Related posts

ಶಿಗ್ಗಾಂವಿಯಲ್ಲಿ ಶೂಟ್; ಕತ್ತಲಲ್ಲಿ ಮನೆಯೊಳಗೆ ಓಡಿ ಬಚಾವಾದ ಸಲ್ಮಾ!!

eNewsLand Team

ದನದ ಕೊಟ್ಟಿಗೆಗೆ ಬೆಂಕಿ 6 ದನ ಸಜೀವ ದಹನ, ಮತ್ತೊಂದು ತೀವ್ರ ಗಾಯ!

eNEWS LAND Team

ಹುಬ್ಬಳ್ಳಿಯ ಭೂಮಾಪಕ ರಮೇಶ ನೀಲಪ್ಪ ಡವಳಗಿ ಜೈಲಿಗೆ: ಯಾಕೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

eNEWS LAND Team