29 C
Hubli
ಸೆಪ್ಟೆಂಬರ್ 26, 2023
eNews Land
ಅಪರಾಧ

ಹುಬ್ಬಳ್ಳಿ: ಸಹಾಯಕ್ಕೆ ಕರೆದ ಕುರುಡ ಸ್ನೇಹಿತನ ಹಣದಾಸೆಗೆ ಕೊಂದವನಿಗೆ ಜೀವಾವಧಿ ಶಿಕ್ಷೆ

ಸಿದ್ದಪ್ಪಜ್ಜನ ಮಠದ ಹಿಂದೆ ಕರೆದೊಯ್ದು ಮಚ್ಚು ಬೀಸಿದ್ದ ಕಿರಾತಕ

ಇಎನ್ಎಲ್ ಧಾರವಾಡ: ಹಣದ ಆಸೆಗಾಗಿ ಕುರುಡ ಸ್ನೇಹಿತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಾಯಾಲಯ ಅಪರಾಧಿ ಬಸವರಾಜ ಜಿಗಳೂರಗೆ 1 ಲಕ್ಷ ರು. ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇಲ್ಲಿಯ ಉಣಕಲ್ ಕೆರೆ ಬಳಿ 2015 ಮೇ 23ರಂದು ರಾತ್ರಿ ಅಂಧ ಜಗದೀಶ ಪರಮೇಶ್ವರ ಶಿರಗುಪ್ಪಿ ಅವರನ್ನು ಕೊಲೆಗೈದ ಬಸವರಾಜ ಅವರ ಬಳಿಯಿಂದ 1.40 ಲಕ್ಷ ರು. ದೋಚಿಕೊಂಡು ಪರಾರಿಯಾಗಿದ್ದ. ಈ ಸಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಹಾಯಕ್ಕಾಗಿ ಕರೆದಿದ್ದ: ಜಗದೀಶ ಅವರ ಸಂಬಳದ ಅರಿಯರ್ಸ್ 1.50 ಲಕ್ಷ ರು. ಗದಗ ಬ್ಯಾಂಕ್ ಖಾತೆಗೆ ಜಮೆ ಆಗಿತ್ತು. ಅಂಧನಾಗಿರುವ ಜಗದೀಶ ಧಾರವಾಡದ ಗೆಳೆಯ ಬಸವರಾಜಗೆ ಈ ಹಣ ತೆಗೆದುಕೊಂಡು ಬರಲು ಸಹಾಯಕ್ಕಾಗಿ ಜೊತೆಗೆ ಬರುವಂತೆ ಕೇಳಿಕೊಂಡಿದ್ದ. ಅದಂತೆ 2015 ಮೇ 22ರಂದು ಬಸವರಾಜನನ್ನು ಕರೆದುಕೊಂಡು ಹೋಗಿ ಹಣ ವಿತ್‌ಡ್ರಾ ಮಾಡಿಸಿ ಕೊಟ್ಟಿದ್ದ. ಆದರೆ, ಜದಗೀಶನನ್ನು ಕೊಲೆ ಮಾಡಿ ದೋಚುವ ಉದ್ದೇಶದಿಂದ ಮೊದಲೆ ಸಂಚು ರೂಪಿಸಿಕೊಂಡಿದ್ದ.
ಅದಕ್ಕಾಗಿ ಗದಗದ ಗ್ರೇನ್ ಮಾರ್ಕೆಟ್‌ನಲ್ಲಿ ಮಚ್ಚು ಖರೀದಿ ಮಾಡಿ ತಂದಿದ್ದ. ಜಗದೀಶನನ್ನು ಮೇ 23ರಂದು ರಾತ್ರಿ 8ರ ಸುಮಾರಿಗೆ ಉಪಾಯದಿಂದ ಉಣಕಲ್ ಸಿದ್ದಪ್ಪಜ್ಜನ ಮಠದ ಹಿಂದಿರುವ ಕೆರೆ ಬಳಿ ಕರೆದುಕೊಂಡು ಹೋಗಿದ್ದ ಬಸವರಾಜ ಅಲ್ಲಿ ಅಂಧ ಗೆಳೆಯನಿಗೆ ಮಚ್ಚಿನಿಂದ ಸಿಕ್ಕಸಿಕ್ಕಲ್ಲಿ ಹೊಡೆದಿದ್ದ. ಗಂಭೀರ ಗಾಯಗೊಂಡ ಬಸವರಾಜ ಬಳಿಯಿಂದ್ದ 1.40 ಲಕ್ಷ ರು. ದೋಚಿ ಜಾಗ ಕಾಲಿ ಮಾಡಿದ್ದ. ಚಿಕಿತ್ಸೆ ಫಲಕಾರಿ ಆಗದೇ ಜಗದೀಶ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ತನಿಖೆ ನಡೆಸಿದ ವಿದ್ಯಾನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರಪ್ಪ  ಎನ್. ಅವರು ಶನಿವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.

Related posts

ಹುಬ್ಬಳ್ಳಿಲಿ ಧಗಧಗನೆ ಉರಿದ ಕಾರು! ಪ್ರಯಾಣಿಕರ ಕತೆ?

eNewsLand Team

ಟ್ರ್ಯಾಕ್ಟರ್ ಟ್ರೇಲರ ಕಳ್ಳನ ಹೆಡೆಮುರಿ ಕಟ್ಟಿದ ಪೋಲಿಸರು

eNEWS LAND Team

ಮೆಕ್ಕೆಜೋಳ ಬೆಳೆಯುವ ರೈತರು ತಪ್ಪದೇ ನೋಡಿ, ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ದಂಡ!

eNEWS LAND Team