35 C
Hubli
ಮಾರ್ಚ್ 29, 2024
eNews Land
ಅಪರಾಧ

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನೆ

ನಗರವಾಸದ ಗೀಳು; ಸುಂದರ ಸಂಸಾರ ಈಗ ಸಾವಿನ ಮನ

ಇಎನ್ಎಲ್ ಬ್ಯೂರೋ
ರಾಮನಗರ: ನಗರ ವಾಸಕ್ಕೆ ಗೀಳು ಬಿದ್ದಿದ್ದ ಪತ್ನಿ ಬೆಂಗಳೂರಿಗೆ ವಾಪಸ್ಸು ಹೋಗುವಂತೆ ಪೀಡಿಸುತ್ತಿದ್ದ ಕಾರಣಕ್ಕೆ ಬೇಸತ್ತ ಪತಿ ಪತ್ನಿಯ ಕತ್ತುಸೀಳಿ ಕೊಂದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾನೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ, ಗುಡ್ಡೆ ವೀರನ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಂದಿರಮ್ಮ (31) ಕೊಲೆಯಾದರೆ, ಆಕೆಯ ಪತಿ ದೇಸೀಗೌಡ (38) ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2 ವರ್ಷಗಳ ಹಿಂದೆ ಕರೋನದಿಂದ ಇಬ್ಬರು ದಂಪತಿಗಳು ಬೆಂಗಳೂರಿನಿಂದ ಸ್ವಗ್ರಾಮ ಗುಡ್ಡೆವೀರನಹೊಸಹಳ್ಳಿ ಗ್ರಾಮಕ್ಕೆ ವಾಪಸ್ಸು ಬಂದಿದ್ದರು. ಸಣ್ಣ ಕಿರಾಣಿ ಹಾಗೂ ಕೋಳಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು.
ಇಂದಿರಮ್ಮ ಪದೇಪದೇ ಬೆಂಗಳೂರಿಗೆ ವಾಪಸು ಹೋಗುವಂತೆ ಪೀಡಿಸುತ್ತಿದ್ದಳು. ಕಳೆದ 3-4 ದಿನಗಳ ಹಿಂದೆ ಮತ್ತೆ ಬೆಂಗಳೂರಿನ ಕ್ಯಾತೆ ತೆಗೆದಿದ್ದಳು. ಇದರಿಂದ ಬೇಸತ್ತ ದೇಸೀಗೌಡ ಪತ್ನಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೋಡಿಹಳ್ಳಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Related posts

ಧಾರವಾಡ: ಖೋಟಾನೋಟು ಎಣಿಸ್ತಿದ್ದೊರು ಈಗ 1,2,3 ಎಂದು ಕಂಬಿ ಲೆಕ್ಕ ಮಾಡ್ತಿದಾರೆ!

eNewsLand Team

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNEWS LAND Team

ಅಣ್ಣಿಗೇರಿಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ; ಮುಂದುವರಿದ ಸಾವಿನ ಸರಣಿ

eNewsLand Team