ಇಎನ್ಎಲ್ ಕುಂದಗೋಳ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕತ್ತೆಬೆನ್ನೂರ ಗ್ರಾಮದ ಆರೋಪಿತರ ವಾಸದ ಮನೆಯಲ್ಲಿ ಲಕ್ಷ್ಮೀ ಲೋಕೇಶ ನೆಗಳೂರ ( 24) ಅವರಿಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಗಂಡ, ಅತ್ತೆ, ಮಾವ, ಮೈದುನ ಸೇರಿಕೊಂಡು ಹಗ್ಗದಿಂದ ಕೈಕಾಲು ಕಟ್ಟಿ ಹೊಡೆದ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀ ಪತಿ ಆರೋಪಿ ನಂ 1 ಲೋಕೇಶ ತಂದೆ ಗದಿಗೆಪ್ಪ ನೆಗಳೂರ 32 ವರ್ಷ ಮಾವ ಆರೋಪಿ ನಂ 2 ಗದಿಗೆಪ್ಪ ತಂದೆ ಸೋಮಪ್ಪ ನೆಗಳೂರ 60 ವರ್ಷ ಅತ್ತೆ ಆರೋಪಿ ನಂ 3 ರೇಣುಕಾ ಕೋಂ ಗದಿಗೆಪ್ಪ ನೆಗಳೂರ 55 ವರ್ಷ ಮೈದುನನಾದ ಆರೋಪಿ 4 ರಾಖೇಶ ತಂದೆ ಗದಿಗೆಪ್ಪ ನೆಗಳೂರ ಎಲ್ಲರೂ ಸಾ..ಕತ್ತೆಬೆನ್ನೂರ ತಾ..ಹೂವಿನಹಡಗಲಿ ಜಿ..ವಿಜಯನಗರ ಇವರೆಲ್ಲರ ಮೇಲೆ ದೂರು ನೀಡಲಾಗಿದೆ.
ಕಲಘಟಗಿ; ಹೇಳಿದಂತೆ ನೇಣು ಹಾಕೊಂಡು ಸತ್ತ ಡ್ರೈವರ್ ಗಂಗ್ಯಾ!!
ಆರೋಪಿಗಳು ಎಲ್ಲಾ ಸೇರಿ ಲಕ್ಷ್ಮೀ ಮದುವೆಯ ಕವ 2 ತೊಲೆ ಬಂಗಾರ 2 ಲಕ್ಷ ಹಣ, & ಬಾಂಡೆ ಸಾಮಾನುಗಳನ್ನು ವರದಿಕ್ಷಿಣೆಯಾಗಿ ಪಡೆದುಕೊಂಡಿದ್ದ. ಲಕ್ಷ್ಮೀಗೆ 2 ತಿಂಗಳು ಚೆನ್ನಾಗಿ ನೋಡಿಕೊಂಡು ನಂತರ ವರದಕ್ಷಿಣೆ ತರುವಂತೆ ಹಗ್ಗದಿಂದ ಕೈಕಾಲು ಕಟ್ಟಿ ಹೊಡೆದು ಇನ್ನು 1 ಲಕ್ಷ ಹಣ ತರುವಂತೆ ಮಾನಸಿಕ & ದೈಹಿಕ ಕಿರುಕುಳ ನೀಡಿದ್ದು ಇರುತ್ತದೆ.
ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2022 ಕಲಂ IPC 1860 (U/s-498A,34); DOWRY PROHIBITION ACT, 1961 (U/s-3,4) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.