23 C
Hubli
ಸೆಪ್ಟೆಂಬರ್ 25, 2023
eNews Land
ಅಪರಾಧ ಜಿಲ್ಲೆ

ಮಹಿಳೆ ಮೇಲೆ ಚಿರತೆ ದಾಳಿ

ಇಎನ್ಎಲ್ ಧಾರವಾಡ
ಕೆಲ ತಿಂಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಇಡೀ ಜಿಲ್ಲೆಯ ಜನರನ್ನು ಆತಂಕಕ್ಕೆ ಈಡು ಮಾಡಿತ್ತು.ವಾರಗಟ್ಟಲೇ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಐದು ವರ್ಷದ ಗಂಡು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದಾಗಿ ಜನರು ನೆಮ್ಮದಿಯಾಗಿದ್ದರು ಅನ್ನೋ ಹೊತ್ತಿಗೆ ಇದೀಗ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲ, ಹಾಡಹಗಲೇ ಮಹಿಳೆಯರ ಮೇಲೆ ದಾಳಿ ಮಾಡಿ, ಪರಾರಿಯಾಗಿದೆ. ಇದರಿಂದಾಗಿ ಇದೀಗ ಮತ್ತೆ ಜನರು ಆತಂಕದಲ್ಲಿ ಬಳಲುವಂತಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರು ಚಿರತೆ ಸೆರೆ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಸುಳ್ಳು ಸುದ್ದಿ ನಂಬದಂತೆ ಮನವಿ ಮಾಡಿಕೊಂಡಿದ್ದಾರೆ.

Related posts

ಮನೆಯಿಂದಲೇ ಮತದಾನ ಮಾಡಿದ 80 ವರ್ಷ ಮೆಲ್ಪಟ್ಟ ಹಿರಿಯ ಹಾಗೂ ವಿಶೇಷಚೇತನ ಮತದಾರರು ಎಷ್ಟು? ಇಲ್ಲಿದೆ ನೋಡಿ!

eNEWS LAND Team

ಹೂಡಿಕೆ ಮಾಡಿಸುವುದಾಗಿ ಆನ್ಲೈನಲ್ಲಿ 4ಲಕ್ಷ ಪೀಕಿದ್ದವ ಮಹಾರಾಷ್ಟ್ರದಲ್ಲಿ ಅರೆಸ್ಟ್

eNewsLand Team

ಅಣ್ಣಿಗೇರಿ; ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣು

eNewsLand Team