ಇಎನ್ಎಲ್ ಹುಬ್ಬಳ್ಳಿ:
ಕುಸುಗಲ್ ರಸ್ತೆಯ ಎಸ್ಬಿಐ ಎಟಿಎಂ ಕೇಂದ್ರದ ಯಂತ್ರದಿಂದ ಹಣ ಡ್ರಾ ಮಾಡುತ್ತಿದ್ದ ಮಧುರಾ ಕಾಲೊನಿಯ ಪುರಂದರ ಹೆಗಡೆ ಅವರಿಗೆ ಯಾಮಾರಿಸಿ, ಅವರ ಡೆಬಿಟ್ ಕಾರ್ಡ್ ಹಾಗೂ ಪಾಸವರ್ಡ್ ಪಡೆದ ವಂಚಕ ಅದರಿಂದ ₹88,700 ವ್ಯವಹಾರ ನಡೆಸಿದ್ದು, ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುರಂದರ ಅವರು ಎಟಿಎಂ ಕೇಂದ್ರದಿಂದ ಹಣ ಪಡೆಯುತ್ತಿರುವಾಗ, ಅಲ್ಲಿಯೇ ಪಕ್ಕದಲ್ಲಿದ್ದ ವ್ಯಕ್ತಿ ಏಕಾಏಕಿ ಯಂತ್ರದಲ್ಲಿ ಕ್ಲೋಸ್ ಬಟನ್ ಒತ್ತಿ ಅವರ ಎಟಿಎಂ ಕಾರ್ಡ್ ತಾನು ಇಟ್ಟುಕೊಂಡು ತನ್ನಲ್ಲಿರುವ ಎಟಿಎಂ ಕಾರ್ಡ್ ಅವರಿಗೆ ನೀಡಿ ಯಾಮಾರಿಸಿದ್ದಾನೆ.
ಮುಂಡಾಮುಚ್ಚಿದ ಫೇಕ್ ಸಿಐಎಸ್ಎಫ್ ಅಧಿಕಾರಿಗಳು!! ಯಾಮಾರಿಸುತ್ತೆ ಆನ್ಲೈನ್ ಜಾಹೀರಾತು! ಎಚ್ಚರ
ನಂತರ ಬೇರೆ ಬೇರೆ ಎಟಿಎಂ ಕೇಂದ್ರಗಳಿಂದ ಐದು ಬಾರಿ ಹಣ ಡ್ರಾ ಮಾಡಿದ್ದಲ್ಲದೆ, ಕಾರ್ಡ್ ಸ್ವೈಪ್ ಮಾಡಿ ಬಂಗಾರದ ಅಂಗಡಿಯಿಂದ ಚಿನ್ನ ಸಹ ಖರೀದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.