ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ನವನಗರದಲ್ಲಿನ ಅಶ್ವಮೇಧ ಪಾರ್ಕ್ನಲ್ಲಿನ ಗಣಪತಿ ಕೊರಬು ಅವರ ಮನೆಗೆ ನುಗ್ಗಿದ ಕಳ್ಳರು ಅಲ್ಮೇರಾದ ಸೇಫ್ಟಿ ಲಾಕರ್ ಮೀಟಿ ಒಳಗಿದ್ದ ₹1.50ಲಕ್ಷ ನಗದು ಕದ್ದು ಪರಾರಿಯಾಗಿದ್ದಾರೆ.
ಮನೆಯ ಮುಂಬಾಗಿಲ ಚಿಲಕ ಒಡೆದ ಕಳ್ಳರು ಒಳನುಗ್ಗಿ ಕಳವು ಮಾಡಿದ್ದಾರೆ. ಈ ಬಗ್ಗೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.