23.8 C
Hubli
ಮಾರ್ಚ್ 28, 2023
eNews Land
ಅಪರಾಧ

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಒತ್ತಾಯಿಸುತಿದ್ದ ಮತಾಂತರಿ

Listen to this article

ಇಎನ್ಎಲ್ ಸುದ್ದಿ ಸೇವೆ :
ಹುಬ್ಬಳ್ಳಿ : ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ  ಆಗುವಂತೆ ಒತ್ತಾಯಿಸುತ್ತಿದ್ದ ಸೋಮಲಿಂಗ‌ ಅವರಾದಿ ಎಂಬಾತನ ಬಂಧನಕ್ಕೆ ಒತ್ತಾಯಿಸಿ ಹಿಂದೂ ಸಂಘಟನೆಗಳಿಂದ‌ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಬೈರಿದೇವರಕೊಪ್ಪದ ಸರ್ವಧರ್ಮ ಪ್ರಾರ್ಥನಾ ಮಂದಿರದಲ್ಲಿ ಹಿಂದೂ ಪಠಣ ಮಾಡಿದ್ದಕ್ಕೆ ಆಕ್ಷೇಪ, ಏಸುವನ್ನು ಪ್ರಾರ್ಥನೆ ಮಾಡಲು ಒತ್ತಾಯಿಸಿದ್ದಕ್ಕೆ ಆಕ್ರೋಶ ಸೋಮಲಿಂಗ ಎಂಬಾತ ಕ್ರಿಶ್ಚಿಯನ್ ಪಾಸ್ಟರ್ ಆಗಿ ನೇಮಕಗೊಂಡಿದ್ದಾನೆ. ಆತ ಹಿಂದೂ‌ಧರ್ಮವನ್ನು ನಂಬದಂತೆ ಒತ್ತಾಯ ಮಾಡುತ್ತಾನೆ ಎಂದು ದೂರು.ಪೊಲೀಸ್ ಠಾಣೆಗೆ‌ ದೂರು‌ ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಠಾಣೆಯ ಎದುರು‌ ಧರಣಿ ಕುಳಿತ ಹಿಂದೂ  ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಶಾಸಕ‌ ಅರವಿಂದ ಬೆಲ್ಲದ ಭೇಟಿ, ಡಿಸಿಪಿ ಜೊತೆಗೆ ಚರ್ಚೆ ನಡಿಸಿ, ಮತಾಂತರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ‌ ಸೂಚನೆ.

ಶಾಸಕ ಅರವಿಂದ ಬೆಲ್ಲದ್ ಹೇಳಿಕೆ :
ಮತಾಂತರ ತಡೆ ಕಠಿಣ ಕಾನೂನು ಜಾರಿಗಾಗಿ ಮುಖ್ಯಮಂತ್ರಿಗಳ ಜೊತೆಗೆ‌ ಚರ್ಚೆ ಮಾಡಿದ್ದೇವೆ. ಕಾಯಿದೆ ರೂಪುರೇಷೆ ಸಂಬಂಧಿಸಿದಂತೆ ಹಿರಿಯ ವಕೀಲರನ್ನು ಸಂಪರ್ಕಿಸಿದ್ದೇವೆ. ಅದರ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಿದ್ದೇವೆ. ಧಾರವಾಡ ಜಿಲ್ಲೆಯಲ್ಲೂ ಮತಾಂತರ ಪ್ರಕ್ರಿಯೆ ‌ನಡೆಯುತ್ತಿದೆ. ಪೊಲೀಸರಿಗೆ ದೂರು ನೀಡಿದರೂ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ.ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ನಮ್ಮ ಕಾರ್ಯಕರ್ತರು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ನೀಡಿದ್ದಾರೆ. ಸೂಕ್ತ ಕ್ರಮಗಳನ್ನು ಜರುಗಿಸದಿದ್ದರೆ ಪೊಲೀಸರ ವಿಳಂಬ ಧೋರಣೆ ಖಂಡಿಸಿ ಹೋರಾಟ ಮಾಡಲಾಗುವುದು

Related posts

ಸಾಲ ಪಡೆಯಬೇಕಾದರೆ ಹುಷಾರ್! ಕಿಡ್ನಾಪ್ ಆಗ್ತೀರಾ!!

eNEWS LAND Team

ಮುಂಡಾಮುಚ್ಚಿದ ಫೇಕ್ ಸಿಐಎಸ್ಎಫ್ ಅಧಿಕಾರಿಗಳು!! ಯಾಮಾರಿಸುತ್ತೆ ಆನ್ಲೈನ್ ಜಾಹೀರಾತು! ಎಚ್ಚರ

eNewsLand Team

ಹುಬ್ಬಳ್ಳಿ; ವಿಮಲ್ ಗುಟ್ಕಾ ವಿಚಾರಕ್ಕೆ ಕಳಸ್’ಗೆ ಚೂರಿ ಚುಚ್ಚಿ ಕೊಲೆ ಮಾಡಿದ ಗೌಸ್!!

eNewsLand Team