28 C
Hubli
ಸೆಪ್ಟೆಂಬರ್ 21, 2023
eNews Land
ಅಪರಾಧ

ಅಕ್ಕ ತಂಗ್ಯಾರ ಅಪರಿಚಿತ ಗಂಡಸ್ರ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡೋಕು ಮೊದ್ಲು ಹುಬ್ಬಳ್ಯಾಗ ಏನಾಗೈತಿ ನೋಡ್ರಿ

ಇಎನ್ಎಲ್ ಧಾರವಾಡ

ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಗರದ ಮಹಿಳೆಗೆ ಅನೈತಿಕ ಸಂಬಂಧದ ಕುರಿತು ಬೆದರಿಸಿ, ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ಸಿದ್ಧೇಶ್ವರ ಪಾರ್ಕ್‌ನ ಉದ್ಯಮಿ ಮಹಿಳೆಗೆ ಉತ್ತರ ಪ್ರದೇಶ ಗೋರಕಪುರದ ಬೆಳಗಾವಿ ಮೂಲದ ನಿವಾಸಿ ಜಿತೇಂದ್ರ ಪಿಸೆ ಬೆದರಿಸಿದ ಆರೋಪಿ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಜಿತೇಂದ್ರ ಎರಡು ತಿಂಗಳ ಹಿಂದೆ ಮಹಿಳೆಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸಿದ್ದ.
ಅದಕ್ಕೆ ಒಪ್ಪದಿದ್ದಾಗ, ತನ್ನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಪತಿ ಮತ್ತು ಸಂಬಂಧಿಕರಿಗೆ ಹೇಳಿ ಕೌಟುಂಬಿಕ ಸಂಬಂಧ ಹಾಳು ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಮಹಿಳೆಯ ಮಗಳ ಜೀವ ತೆಗೆಯುವುದಾಗಿ ಹೆದರಿಸಿ, ಹಣ ನೀಡುವಂತೆ ಬೆದರಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related posts

ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ವಕೀಲ ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ!!

eNEWS LAND Team

ಗೌರಿ ಲಂಕೇಶ್ ಹತ್ಯೆ: ಆರೋಪಿಗಳನ್ನು ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

eNewsLand Team

ಇನ್ಸ್ಟಾಗ್ರಾಂ ಕ್ರೈಂ; ಹುಬ್ಬಳ್ಳಿ ಹುಡುಗಿ ಹೆಸರಲ್ಲಿ ದುಷ್ಕರ್ಮಿಗಳು ಏನ್ ಮಾಡಿದ್ದಾರೆ ಗೊತ್ತಾ?

eNewsLand Team