ಇಎನ್ಎಲ್ ನವಲಗುಂದ:
ಆನ್ಲೈನ್ನಲ್ಲಿ ವಂಚನೆ: ಫೇಸ್ಬುಕ್ನಲ್ಲಿ ಹಾಕಿರುವ ಕಾರು ಮಾರಾಟದ ಜಾಹೀರಾತು ನೋಡಿ ಖರೀದಿಸಲು ಮುಂದಾದ ಧಾರವಾಡದ ನವಲಗುಂದ ರಸ್ತೆಯ ಶಿಕ್ಷಕ ಸುರೇಶ ಕಮ್ಮಾರ ಅವರು ಆನ್ಲೈನ್ನಲ್ಲಿ ₹1.08 ಲಕ್ಷ ವಂಚನೆಗೊಳಗಾಗಿದ್ದಾರೆ.
ಜಾಹೀರಾತು ನೀಡಿದ್ದ ವ್ಯಕ್ತಿ ಹೈದರಾಬಾದ್ನಲ್ಲಿ ಸೇನೆಯಲ್ಲಿ ಇರುವುದಾಗಿ ಸುರೇಶ ಅವರಿಗೆ ಪರಿಚಯಿಸಿಕೊಂಡು, 2013ರ ಸ್ವಿಫ್ಟ್ ಕಾರು ಮಾರಾಟ ಮಾಡುವುದಾಗಿ ಹೇಳಿದ್ದ. ಅದನ್ನು ನಂಬಿದ ಸುರೇಶ, ಮುಂಗಡವಾಗಿ ಅವರ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ಕಾರು ನೀಡದೆ, ಹಣವನ್ನೂ ಮರಳಿಸದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.