ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ಆಸೆ, ಆಮಿಷ ಒಡ್ಡುತ್ತಿರುವ ಪ್ರಯತ್ನದ ಪ್ರಕರಣವೊಂದು ಜಗಜ್ಜಾಹೀರಾಗಿದೆ.
ಪುರಸಭೆ ಚುನಾವಣೆಗೆ ವಾರ್ಡ್ ನಂಬರ್ 4 ಉದಯ ನಗರದಿಂದ ಜನತಾ ಪಕ್ಷ ವ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಬಾಬಾಜಾನ ಮೆಹಬೂಬಸಾಬ ಮುಲ್ಲಾನವರ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಸೀರೆ ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಈ ಮಹಾಶಯ ಡಿ. 25ರಂದು ಬೆಳಗ್ಗೆ 9-40 ಗಂಟೆಗೆ ಅಣ್ಣಿಗೇರಿಯ ವಾರ್ಡ ನಂಬರ್ 4 ರಲ್ಲಿನ ಅಂಬೇಡ್ಕರ ಭವನದ ಹಿಂದಿನ ರಸ್ತೆಯಲ್ಲಿ ತನ್ನ ಪರವಾಗಿ ಕೆಲಸ ಮಾಡುವ ಆರೋಪಿ 2 ನೇ ವ್ಯಕ್ತಿ ಅಬ್ಬಾಸ ಅಲ್ಲಾಭಕ್ಷ ಎಂಬವನೊಂದಿಗೆ ಪುರಸಭೆ ಚುನಾವಣೆಯ ವೇಳೆ ತಮಗೆ ಮತ ಹಾಕುವಂತೆ ಮತದಾರರಿಗೆ ಆಮೀಷ ಒಡ್ಡುವ ಸಲುವಾಗಿ ಸೀರೆಗಳನ್ನು ಹಂಚಲು ತಂದು ಒಗೆದು ಹೋಗಿದ್ದಾರೆ.
ಈ ಮೂಲಕ ಆರೋಪಿಗಳು ಅಣ್ಣಿಗೇರಿ ಪುರಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ನೀಡಿದಂತೆ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.172/2021 ಕಲಂ IPC 1860 (U/s-171E,34) ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.