24 C
Hubli
ಸೆಪ್ಟೆಂಬರ್ 27, 2023
eNews Land
ಅಪರಾಧ

ಅಣ್ಣಿಗೇರಿ ಚುನಾವಣೆಯಲ್ಲಿ ಸೀರೆ ಹಂಚಲಾಗ್ತಿದೆಯಾ? ವಾರ್ಡ್ ನಂ.4 ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು!!

ಇಎನ್ಎಲ್ ಅಣ್ಣಿಗೇರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ ಮತದಾರರಿಗೆ ಆಸೆ, ಆಮಿಷ ಒಡ್ಡುತ್ತಿರುವ ಪ್ರಯತ್ನದ ಪ್ರಕರಣವೊಂದು ಜಗಜ್ಜಾಹೀರಾಗಿದೆ.

ಪುರಸಭೆ ಚುನಾವಣೆಗೆ ವಾರ್ಡ್ ನಂಬರ್ 4 ಉದಯ ನಗರದಿಂದ ಜನತಾ ಪಕ್ಷ ವ ಪಕ್ಷೇತರ  ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಬಾಬಾಜಾನ ಮೆಹಬೂಬಸಾಬ ಮುಲ್ಲಾನವರ ವಿರುದ್ಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಸೀರೆ ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಈ ಮಹಾಶಯ ಡಿ. 25ರಂದು ಬೆಳಗ್ಗೆ 9-40 ಗಂಟೆಗೆ ಅಣ್ಣಿಗೇರಿಯ ವಾರ್ಡ ನಂಬರ್ 4 ರಲ್ಲಿನ ಅಂಬೇಡ್ಕರ ಭವನದ ಹಿಂದಿನ ರಸ್ತೆಯಲ್ಲಿ ತನ್ನ ಪರವಾಗಿ ಕೆಲಸ ಮಾಡುವ ಆರೋಪಿ 2 ನೇ ವ್ಯಕ್ತಿ ಅಬ್ಬಾಸ ಅಲ್ಲಾಭಕ್ಷ  ಎಂಬವನೊಂದಿಗೆ ಪುರಸಭೆ ಚುನಾವಣೆಯ ವೇಳೆ ತಮಗೆ ಮತ ಹಾಕುವಂತೆ ಮತದಾರರಿಗೆ ಆಮೀಷ ಒಡ್ಡುವ ಸಲುವಾಗಿ ಸೀರೆಗಳನ್ನು ಹಂಚಲು ತಂದು ಒಗೆದು ಹೋಗಿದ್ದಾರೆ.

ಈ ಮೂಲಕ ಆರೋಪಿಗಳು ಅಣ್ಣಿಗೇರಿ ಪುರಸಭೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ವರದಿ ನೀಡಿದಂತೆ ಸ್ಥಳೀಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಕುರಿತು  ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ.172/2021  ಕಲಂ IPC 1860 (U/s-171E,34) ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

Related posts

ಆಸಿಡ್ ದಾಳಿ; ಸಂತ್ರಸ್ತರಿಗೆ ನಿವೇಶನ/ ಮನೆನೀಡಲು ಆದೇಶ: ಸಿಎಂ ಬೊಮ್ಮಾಯಿ

eNewsLand Team

Sexual violence against girl: Andhra Swamiji arrested; Called to press foot at night and sexually assaulted

eNEWS LAND Team

ಹುಬ್ಬಳ್ಳಿ; ವಿಮಲ್ ಗುಟ್ಕಾ ವಿಚಾರಕ್ಕೆ ಕಳಸ್’ಗೆ ಚೂರಿ ಚುಚ್ಚಿ ಕೊಲೆ ಮಾಡಿದ ಗೌಸ್!!

eNewsLand Team