27 C
Hubli
ಡಿಸೆಂಬರ್ 7, 2023
eNews Land
ಅಪರಾಧ

ಹುಬ್ಬಳ್ಳಿ: ಸಿದ್ಧಾರೂಢರ ಪೂಜೆಗೆ ಕಲ್ಯಾಣಿಗೆ ಇಳಿದ ಉಮೇಶ್ ಮುಳುಗಿ ಸಾವು!

ಇಎನ್ಎಲ್ ಧಾರವಾಡ: ಹಳೇ‌ ಹುಬ್ಬಳ್ಳಿ ಶ್ರೀ ಸಿದ್ದಾರೂಢರ ಮಠದ ಕೆರೆಯಲ್ಲಿನ ಶ್ರೀ ಸಿದ್ದಾರೂಢರ ಹಾಗೂ ಗುರುನಾಥರೂಢರ ಮೂರ್ತಿಗೆ ಪೂಜೆ ಸಲ್ಲಿಸಲು ಈಜಿ ಹೋದ ಉಮೇಶಪ್ಪ ಜಾಲಿಹಾಳ (22) ಮುಳುಗಿ ಮೃತಪಟ್ಟಿದ್ದಾನೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರಿನ ಈ ಯುವಕ ಮೃತಪಟ್ಟವ. ಮಂಗಳವಾರ ಬೆಳಗ್ಗೆ ಕೆರೆಯಲ್ಲಿ ಇರುವ ಉಭಯ ಶ್ರೀಗಳ ಪೂಜೆಗೆ ಈಜಿ ತೆರಳಿದ್ದ. ಆದರೆ, ಕೈ ಸೋತು ಅಥವಾ ಆರೋಗ್ಯ ಕ್ಷೀಣಗೊಂಡ ಹಿನ್ನೆಲೆಯಲ್ಲಿ ಕೆರೆಯಲ್ಲಿ ಮುಳುಗಿದ್ದು ಮೇಲೆ ಬಂದಿಲ್ಲ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರು ಧಾವಿಸಿದ್ದು NDRF ಮೂಲಕ ತರಿಸಿ ಕೆರೆಯಲ್ಲಿ ಮುಳುಗಿರುವ ಉಮೇಶಗಾಗಿ ಪತ್ತೆ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಆತ ಶವವಾಗಿ ಪತ್ತೆಯಾದ. ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

Related posts

ಸೆಲ್ಫಿ ಹುಚ್ಚು.. ಜೀವಕ್ಕೆ ಕುತ್ತು… ಜ್ಞಾನವೋ… ಅಜ್ಞಾನವೋ ಗೊತ್ತಿಲ್ಲ

eNEWS LAND Team

ನೂಲ್ವಿಯಲ್ಲಿ ಕಳ್ಳನ ಕೈಚಳಕ, ಚಿನ್ನಾಭರಣ, ನಗದು ಹೊತ್ತೊಯ್ದ: ದೂರು ದಾಖಲು

eNewsLand Team

ಮತ್ತೆ ರಕ್ತದ ಕಲೆ ಕಂಡ ಚೋಟಾ ಮುಂಬೈ ಹುಬ್ಬಳ್ಳಿ

eNEWS LAND Team