27.5 C
Hubli
ಏಪ್ರಿಲ್ 19, 2024
eNews Land
ಅಪರಾಧ

ಸಾಲಬಾಧೆಗೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ; ಕಣ್ಣೀರಲ್ಲಿ ಕುಟುಂಬ

ಇಎನ್ಎಲ್ ಕುಂದಗೋಳ: ಸಾಲಬಾಧೆ ಹೊರೆಯಿಂದ ಬೇಸತ್ತು ರೈತ ತನ್ನ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯರಿನಾರಾಯನಪುರ ಗ್ರಾಮದ ಚನ್ನಪ್ಪಾ ಯಲ್ಲಪ್ಪ ನಾಗರಹಳ್ಳಿ (59) ಆತ್ಮಹತ್ಯೆ ಮಾಡಿಕೊಂಡ ರೈತ.
ಇವರು ಈಗ ಎರಡು ವರ್ಷಗಳ ಹಿಂದೆ ಯರಗುಪ್ಪಿಯ ಕೆವಿಜಿ ಬ್ಯಾಂಕನಲ್ಲಿ ₹ 2,00,000 ಬೆಳೆಸಾಲ ಪಡೆದುಕೊಂಡಿದ್ದ. ಹುಬ್ಬಳ್ಳಿಯ ಐಐಎಫ್ ಎಲ್ ಹೋಮ್ ಲೋನ್ ನಲ್ಲಿ ₹ 5,00,000 ಸಾಲ ಪಡೆದಿದ್ದರು.

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!
ಕಳೆದ 3 ವರ್ಷಗಳಿಂದ ಸರಿಯಾಗಿ ಮಳೆಯಾಗದ್ದರಿಂದ ಸರಿಯಾಗಿ ಬೆಳೆ ಬಾರದೆ ನಷ್ಟ ಆಗಿದ್ದು, ಮತ್ತು ಮನೆತನ ಮಾಡಲು ಊರಲ್ಲಿ ಕೈಗಡ ಸಾಲವನ್ನು ಮಾಡಿದ್ದ. ಮಾಡಿದ ಸಾಲವನ್ನು ಹೇಗೆ ತೀರಿಸುವುದು ಅಂತ ಚಿಂತೆ ಮಾಡುತ್ತಾ, ಅದನ್ನೆ ಮನಸ್ಸಿಗೆ ಹಚ್ಚಿಕೊಂಡು  ಹೋಸಮನೆಯಲ್ಲಿ ನೂಲಿನ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟಿದ್ದಾರೆ.
ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 22/2022 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ  ಪ್ರಕರಣವನ್ನು ದಾಖಲಾಗಿದೆ.

Related posts

ಹುಬ್ಬಳ್ಳಿ ಅಂಚೆ ಕಚೇರಿಗ ಕನ್ನಾ ಹೊಡದಾರ!!

eNEWS LAND Team

ಹುಬ್ಬಳ್ಳಿ ಮಾಜಿ ಕಾರ್ಪೊರೇಟರ್ ಮಗನ ಫೋಟೊ ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳು

eNEWS LAND Team

ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯ ಹೆಣ ಬೀಳಿಸಿದ ಪುತ್ರಿ!

eNewsLand Team