ಇಎನ್ಎಲ್ ಹುಬ್ಬಳ್ಳಿ: ದುಷ್ಕರ್ಮಿ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಿಸಿ 2.10 ಲಕ್ಷರು. ವರ್ಗಾವಣೆ ಮಾಡಿಕೊಂಡು ವಂಚಿಸಿದ ಕುರಿತು ಇಲ್ಲಿನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪಟಗೇರಿ ನಿವಾಸಿ ಅನಿಮೇಶ ಮೈತಿ ವಂಚನೆಗೆ ಒಳಗಾದವರು. ಹಣ ಪಾವತಿ ಆದರೂ ರೈಲ್ವೆ ಟಿಕೆಟ್ ಮುಂಗಡ ಬುಕ್ ಆಗದ ಕಾರಣಕ್ಕಾಗಿ ಎಸ್ಬಿಐ ಬ್ಯಾಂಕಿಗೆ ವಿಚಾರಿಸಲು ಆನ್ಲೈನ್ ನಲ್ಲಿ ಸಿಕ್ಕ ನಂಬರ್ ಗೆ ಕರೆ ಮಾಡಿದಾಗ ವಂಚಕ ಎನಿಡೆಸ್ಕ್ ಆ್ಯಪ್ ಡೌನ್ಲೋಡ್ ಮಾಡಿಸಿದ್ದಾರೆ. ಬಳಿಕ ಟೆಕ್ಸ್ಟ್ ಮೆಸೆಜ್ ಮೂಲಕ ಕ್ರೆಡಿಟ್ ಕಾರ್ಡಿನ ನಂಬರ್ , ಸಿವಿವಿ ನಂಬರ್ ಕದ್ದು ಆನ್ಲೈನ್ ಮೂಲಕ ಹಣವನ್ನು ಹಂತದಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾನೆ.
previous post
next post