ಇಎನ್ಎಲ್ ಧಾರವಾಡ/ಕಲಘಟಗಿ: ಪಟ್ಟಣದ ಮಹಿಳೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು, ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯನ್ನು, ಧಾರವಾಡ ಜಿಲ್ಲೆಯ ಪೊಲೀಸರು ಪ್ರಶಂಸಾ ಪತ್ರವನ್ನು ನೀಡಿ ಸನ್ಮಾನಿಸಿದ್ದಾರೆ.
ಮೈಮೇಲೆ ಗಾಯಗಳಾದರೂ ಲೆಕ್ಕಿಸದೇ ಹಲ್ಲೆಗಾರನನ್ನು ತಡೆದಿರುವ ಕಲಘಟಗಿಯ ರುಸ್ತುಂಅಲಿ ಮಿಠಾಯಿಗಾರ ಇವರ ಧೈರ್ಯ ಮತ್ತು ನಾಗರಿಕ ಪ್ರಜ್ಞೆಯನ್ನು ಮೆಚ್ಚಿ… ಜಿಲ್ಲಾ ಶೌರ್ಯ ಪ್ರಶಸ್ತಿ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ಧಾರವಾಡ ಜಿಲ್ಲೆಯ ಪೊಲೀಸ್ ಅಧೀಕ್ಷಕ ಲೋಕೇಶ್ ಜಗಲಾಸರ್ ಪ್ರಶಂಸಾ ಪತ್ರವನ್ನು ನೀಡಿದ್ದಾರೆ. ಈ ವೇಳೆ ಕಲಘಟಗಿ ಸಿಪಿಐ ಶ್ರೀಶೈಲ ಕೌಜಲಗಿ ಇದ್ದರು.