ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಎ.ಪಿ.ಎಮ್.ಸಿ. ಆವರಣದಲ್ಲಿ ಸರಕಾರದ ನಿಯಮಾನುಸಾರ ಕಡಲೆ ಖರೀದಿ ಕೇಂದ್ರವನ್ನು ಅಣ್ಣಿಗೇರಿ ತಾಲೂಕ ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್ ಅಧ್ಯಕ್ಷ ಪ್ರಕಾಶ ಅಂಗಡಿ ಉದ್ಘಾಟಿಸಿದರು.
ಬಹುದಿನಗಳಿಂದ ಕಡಲೆ ಖರೀದಿ ಕೆಂದ್ರ ತೆರೆಯುವ ನೀರಿಕ್ಷೆಯಲ್ಲಿದ್ದ ರೈತರಿಗೆ ಮಂದಹಾಸ ಮೂಡಿದ್ದು, ಒಂದು ಕ್ವಿಂಟಲ್ಗೆ ₹5230 ಬೆಂಬಲ ಬೆಲೆ ನಿಗದಿಪಡಿಸಿದ್ದು, 15 ಕ್ಷಿಂಟಲ್ ವರೆಗೆ ಖರೀದಿ ಮಾಡುತ್ತಿರುವುದು ರೈತರಿಗೆ ಸಂತಸ ತಂದಿದೆ. ಒಕ್ಕಲೆ ಮಾಡಿದ ಕಡಲೆಕಾಳು ಶುಚಿತ್ವಗೊಳಿಸಿ ಮಾರಾಟ ಮಾಡಲು ರೈತಬಾಂಧವರು ಕಡಲೆ ಖರೀದಿ ಕೇಂದ್ರದ ಸದ್ಬಳಿಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಾರಾಯಣ ಮಾಡೊಳ್ಳಿ, ಲಕ್ಷ್ಮಣ ಮುದನಾಯ್ಕರ, ಭಗವಂತ ಪುಟ್ಟಣ್ಣವರ,ವಿ.ಜಿ ಮುದರಡ್ಡಿ, ಕೃಷ್ಣರಡ್ಡಿ ಮಾಡೊಳ್ಳಿ, ದ್ಯಾವನಗೌಡ ಪಾಟೀಲ, ಬಸವರಾಜ ಹಾದಿಮನಿ, ಗುರುಸಿದ್ದಪ್ಪ ಕೊಪ್ಪದ, ಯಲ್ಲಪ್ಪ ಮೊರಬಸಿ, ಸಿಇಓ ಉಮೇಶ ಹಿರೇಮಠ, ಕಾಶಪ್ಪ ಅಂಗಡಿ, ವಿರೇಶ ಕುಂಬಾರ, ನಿಂಗನಗೌಡ ಕುರಹಟ್ಟಿ, ಪಾಂಡುರಂಗ ಬಿರಸಲ್, ಜಗದೀಶಗೌಡ ಉಪಸ್ಥಿತರಿದ್ದರು.