ಇಎನ್ಎಲ್ ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಕಾರ್ಯದರ್ಶಿ ಮೆರುನಂದನ ಕೆ.ಬಿ. ಅವರನ್ನು ವ್ಯಾಪಾರಸ್ಥರ ಸಂಘದಿಂದ ಜು.5 ರಂದು ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ ಮತ್ತು ಗೌರವ ಕಾರ್ಯದರ್ಶಿ ರಾಜಕಿರಣ ಮೆಣಸಿನಕಾಯಿ ಇವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಸಂಘದ ಉಪಾಧ್ಯಕ್ಷ ಪ್ರಮೋದ ಸೋಳಂಕಿ, ಅಶೋಕ ಬಾಳಿಕಾಯಿ, ಸಂಜಯ ಭಂಡಾರಕರ, ವಿನೋದ ತಲ್ಲೂರ, ನಾರಾಯಣ ಭಂಡಾರಕರ, ಭರಮಗೌಡ ಪಾಟೀಲ, ಸುರೇಶ ಹುಣಸಿಕಟ್ಟಿ, ವೀರಣ್ಣ ವಾಲಿ, ವಿನೋದ ಜೈನ್, ಸದಾನಂದ ಶಿಗ್ಗಾಂವ, ಮಂಜುನಾಥ ಸೋಮನಗೌಡ್ರ, ಶ್ರೀನಿವಾಸ ಸೋಳಂಕಿ ಮುಂತಾದವರು ಉಪಸ್ಥಿತರಿದ್ದರು.